ದೊಡ್ಡಬಳ್ಳಾಪುರ (Doddaballapura): ತಾಲೂಕಿನ ತೂಬಗೆರೆಯಲ್ಲಿ ತೂಬಗೆರೆ ಚಾವಡಿ ಗಣೇಶೋತ್ಸವ ಸಮಿತಿಯ ವತಿಯಿಂದ ಕೂಡಿಸಿದ್ದ ಅಂಬಾರಿ ಗಣೇಶ ಮೂರ್ತಿಯನ್ನು ಆನೆ (Elephant) ಅಂಬಾರಿ ಮೂಲಕ ಗ್ರಾಮದಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಿ ವಿಸರ್ಜನೆ ಮಾಡಲಾಯಿತು.
ತೂಬಗೆರೆ ಚಾವಡಿ ಗಣೇಶೋತ್ಸವ ಸಮಿತಿಯವರು ಮೊದಲ ಬಾರಿಗೆ ತೂಬಗೆರೆಯ ಇತಿಹಾಸದ ದಸರಾ ಮಾದರಿ ಆನೆ ಅಂಬಾರಿ ಗಣೇಶ ಮೆರವಣಿಗೆಯನ್ನು ಆಯೋಜಿಸಿದ್ದು, ಇದು ಊರಿನ ಇತಿಹಾಸದಲ್ಲಿ ಸ್ಮರಣೀಯ ಕ್ಷಣವಾಗಿದ್ದು, ನೂರಾರು ಜನರು ಕಣ್ತುಂಬಿಕೊಂಡರು.

ಅಂಬಾರಿ ಆನೆಯೊಂದಿಗೆ ಗಾರುಡಿ ಗೊಂಬೆಗಳು,ವಿವಿಧ ಕಲಾತಂಡಗಳು, ನಾದಸ್ವರ, ಕಲಾ ತಂಡಗಳು ಮನರಂಜಿಸಿದವು.
ಸಮಿತಿಯ ಮುಖಂಡರು ಮಾತನಾಡಿ, ಇತಿಹಾಸದಲ್ಲಿಯೇ ಮೊದಲ ಬಾರಿ ಆನೆ ಅಂಬಾರಿ ಮೆರವಣಿಗೆಯನ್ನು ಆಯೋಜಿಸಿದ್ದು, ಇದು ಊರಿನ ಸಾಂಸ್ಕೃತಿಕ ಇತಿಹಾಸದಲ್ಲಿ ಸ್ಮರಣೀಯ ಕ್ಷಣವಾಗಿದೆ ಎಂದರು.

