ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮೋಪರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಕಿರಿಯ ಪ್ರಾಥಮಿಕ ಪಾಠಶಾಲೆ ಸಹಯೋಗದಲ್ಲಿ
ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ರ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲೆಯ ಮುಖ್ಯಶಿಕ್ಷಕ ಶ್ರೀಧರ್, ರಾಮಾಯಣ ಮತ್ತು ಮಹಾಭಾರತವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು, ಉಕ್ಕಿನ ಮನುಷ್ಯ ಪಟೇಲ್ ರ ಜಯಂತಿಯನ್ನು ಏಕತಾದಿವಸ್ ಎಂದು ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಪ್ರಾಧ್ಯಾಪಕ ಡಾ.ಎಂ ಚಿಕ್ಕಣ್ಣ, ವಾಲ್ಮೀಕಿ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ರಂತ ಗಣ್ಯ ಪುರುಷರ ಜಯಂತಿಗಳು ಕೇವಲ ಆ ಸಮುದಾಯದವರಿಗೆ ಆ ದಿನಗಳಿಗೆ ಸೀಮಿತವಾಗದೆ ಮಹರ್ಷಿ ವಾಲ್ಮೀಕಿ, ರಾಮಾಯಣದ ವಿಷಯಗಳನ್ನು ಆಧರಿಸಿ ವಿಚಾರ ಸಂಕಿರಣಗಳನ್ನ , ಉಪನ್ಯಾಸ, ಕಾರ್ಯಕ್ರಮ ಗಳನ್ನ, ಕಾರ್ಯಗಾರಗಳನ್ನ ಹಮ್ಮಿಕೊಳ್ಳುವ ಮುಖೇನ ಯುವಪೀಳಿಗೆಗಳಿಗೆ ಮಾಹಿತಿ ಬಿತ್ತುವ ಕೆಲಸವನ್ನು ಮಾಡಬೇಕು. ರಾಮಾಯಣ ಮತ್ತು ವಾಲ್ಮೀಕಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ .ಕೇಂದ್ರದ ಮಾದರಿಯಲ್ಲಿ 7.5 ಮೀಸಲಾತಿಯಂತೆ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದಲ್ಲಿಯೂ ನಾಗಮೋಹನ್ ದಾಸ್ ರವರ ವರದಿಯಂತೆ 7.5 ಮೀಸಲಾತಿ ಜಾರಿಗೆ ಬಂದರೆ ವಾಲ್ಮೀಕಿ ಸಮುದಾಯಕ್ಕೆ ನ್ಯಾಯಸಿಕ್ಕಂತಾಗುತ್ತದೆ, ಅಂದಿನ ರಾಮಾಯಣದಲ್ಲಿ ಪ್ರಜಾಪ್ರಭುತ್ವದ ವಿಷಯಗಳು, ಭ್ರಾತೃತ್ವ ಪರಿಕಲ್ಪನೆ, ಏಕಪತ್ನಿಯ ವಿಚಾರಗಳು ಶೈಕ್ಷಣಿಕ ಪದ್ದತಿಯ ಅಂಶಗಳು ಮಿಳಿತ ಆಗಿರುವುದು ನಮಗೆ ಗೋಚರಿಸುತ್ತದೆ ಎಂದರು.
ಇಂದಿನ ದಿನಮಾನಗಳಲ್ಲಿ ಈ ರೀತಿಯ ಸರ್ದಾರ್ ವಲ್ಲಭಭಾಯಿ ಪಟೇಲ ರಂತ ಗಣ್ಯಮಾನ್ಯರ ಜೀವನ ಮಾದರಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕ ವಾಗುತ್ತದೆ, ಉಕ್ಕಿನ ಮನುಷ್ಯ ಪಟೇಲರು ಹರಿದು ಹಂಚಿಕೆ ಆಗಿದ್ದ ಭಾರತ ವನ್ನು ಒಟ್ಟು ಗೂಡಿಸುವಲ್ಲಿ ಸಾಕಷ್ಟು ಶ್ರಮವಹಿಸಿದರು ಎಂದರು.
ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿಕೃಷ್ಣ, ನಿರ್ದೇಶಕರಾದ ಕೃಷ್ಣಪ್ಪ, ಮಾರಪ್ಪ, ದಾಸಪ್ಪ, ವೆಂಕಟಲಕ್ಷ್ಮಮ್ಮ, ವೆಂಕಟಮ್ಮ, ಹನುಮಂತಗೌಡ, ಮುಖಂಡರಾದ ಆಂಜಿನಪ್ಪ, ಗಂಗರಾಜ, ಸಹಶಿಕ್ಷಕಿ ಶಶಿಕಲಾ, ಹಾಲು ಪರೀಕ್ಷಕ ಶರಣ್ ರಾಜ್ ಮತ್ತಿತರರಿದ್ದರು.

