ತಾಳ್ಮೆ ಪರೀಕ್ಷೆಗೂ ಗೊರವನಹಳ್ಳಿ ರಸ್ತೆಗೆ ಬರಬೇಡಿ / ಜನ ಹಿತ ಮರೆತವರ ಮುಂದೆ ಎಷ್ಟೆಂದು ಕಿಂದರಿ ಬಾರಿಸೋದು..?

ದೊಡ್ಡಬಳ್ಳಾಪುರ: ರಾಜ್ಯದಲ್ಲಿನ ಪ್ರವಾಸಿ ಕ್ಷೇತ್ರಗಳ ಅಭಿವೃದ್ದಿಗೊಳಿಸಲು ಪ್ರವಾಸೋದ್ಯಮ ಇಲಾಖೆ ಮೂಲಕ ಸರಕಾರಗಳು ಕೊಟ್ಯಾಂತರ ರೂ ಅನುದಾನವನ್ನು ನೀಡಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ನಾನಾ ಕಸರತ್ತುಗಳನ್ನು ಮಾಡುತ್ತವೆ.ಆದರೆ  ದೊಡ್ಡಬಳ್ಳಾಪುರದಿಂದ ಹೊಸಹಳ್ಳಿ ಮೂಲಕ ಸಾಗುವ ಗೋರವನಹಳ್ಳಿ ಮುಖ್ಯರಸ್ತೆ. ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳಕಡೆಗಣನೆ ಇಂದಾಗಿ ಪ್ರಮುಖ ಪ್ರವಾಸಿ ತಾಣಗಳಾದ ನಂದಿ ಬೆಟ್ಟ,ಎಸ್.ಎಸ್.ಘಾಟಿ, ಗೊರವನಹಳ್ಳಿ ಲಕ್ಷ್ಮೀದೇವಾಲಯ ಸಂಪರ್ಕಿಸುವ ರಸ್ತೆ ಅವ್ಯವಸ್ಥೆಯಿಂದಾಗಿ ಪ್ರವಾಸಿಗರನ್ನು ಸೆಳೆಯಲು ವಿಫಲವಾಗುತ್ತಿರುವ ಜೊತೆಗೆ ಈ ವ್ಯಾಪ್ತಿಯ ಗ್ರಾಮಗಳಿಗೆ ತೆರಳುವುದು ಸುಮಾರು ವರ್ಷಗಳಿಂದ ನರಕ ದರ್ಶನವಾಗುತ್ತಿದೆ.

ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಮಾರ್ಗವಾಗಿ ಗೊರವನಹಳ್ಳಿ ತೆರಳುವ 14.5ಕಿಮಿ ರಸ್ತೆ ಹದಗೆಟ್ಟು ಸುಮಾರು 30ಕ್ಕು ಹೆಚ್ಚು ವರ್ಷಗಳಾಗಿವೆ.

ದೊಡ್ಡಬಳ್ಳಾಪುರದ ಸನಿಹದಲ್ಲಿರುವ ಶ್ರೀ ಘಾಟಿಸುಭ್ರಮಣ್ಯ ದೇವಾಲಯ, ನಂದಿಬೆಟ್ಟದ ಭೇಟಿಗೆ ಬರುವ ಪ್ರವಾಸಿಗರಿಗೆ ಪಕ್ಕದ ತಾಲೂಕಿನ ಕೊರಟಗೆರೆಗೆ ಸೇರಿರುವ ಶ್ರೀ ಕ್ಷೇತ್ರವಾದ ಗೋರವನಹಳ್ಳಿ ತೆರಳಲು ಅತಿ ಸನಿಹದ ರಸ್ತೆಯಾದ ಕಾರಣ ಹಲವಾರು ವರುಷಗಳ ಕಾಲ ಪ್ರವಾಸಿಗರು ರಸ್ತೆಯನ್ನು ಬಳಸುತಿದ್ದರು ಅಲ್ಲದೆ ಬೆಂಗಳೂರಿನಿಂದ ಗೊರವನಹಳ್ಳಿಗೆ ಈ ಮಾರ್ಗ ಅತಿ ಕಡಿಮೆ ಅಂತರವಾದ ಕಾರಣ ಪ್ರತಿ ಶುಕ್ರವಾರ,ಮಂಗಳವಾರ ಹಾಗೂ ಭಾನುವಾರಗಳಂದು ವಾಹನಗಳ ಸಂಚಾರ ಹೆಚ್ಚಾಗಿ ಈ ರಸ್ತೆಯ ವ್ಯಾಪ್ತಿಯ ಗ್ರಾಮಗಳಿಗೆ ಆರ್ಥಿಕವಾಗಿ ಅನುಕೂಲಕರವಾಗಿತ್ತು.ಆದರೆ,ಈ ರಸ್ತೆಯ ನಿರ್ವಹಣೆ ಕೊರತೆಯಿಂದ ಹಳ್ಳಕೊಳ್ಳಗಳಂತಹ ಗುಂಡಿಗಳಿಗೆ ಹೆದರುವ ಪ್ರವಾಸಿಗರು ದೊಡ್ಡಬಳ್ಳಾಪುರದಿಂದ ದಾಬಸ್‌ಪೇಟೆ ಮೂಲಕ ಸುತ್ತಿ ಬಳಸಿ ಗೋರವನಹಳ್ಳಿ ತೆರಳುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ.

ಹೊಸಹಳ್ಳಿ ಗ್ರಾಮದ ನಂತರ ಪ್ರಾರಂಭವಾಗುವ ಗುಂಡಿ ಬಿದ್ದಿರುವ ರಸ್ತೆಯು ಕೊರಟಗೆರೆ ಗಡಿಯವರೆವಿಗೂ ಸುಮಾರು 14.5ಕಿಮಿ ದೂರದವರೆಗೆ ಸಂಚರಿಸಲು ಅಸಾಧ್ಯವಾದ ರಸ್ತೆಯದಾಗಿದೆ.ಈ ವ್ಯಾಪ್ತಿಯಲ್ಲಿನ ಜಕ್ಕೇನಹಳ್ಳಿ,ಕಲ್ಲುಕುಂಟೆ,ಕಾಮೇನಹಳ್ಳಿ,ಪಚ್ಚಾರಲಹಳ್ಳಿ, ಲಿಂಗವೀರನಹಳ್ಳಿ, ಮರಿಮಾಕನಹಳ್ಳಿ,ದೊಡ್ಡನರಸಯ್ಯನಪಾಳ್ಯ,ಗುಟ್ಟಹಳ್ಳಿ,ಚಿಕ್ಕನರಸಯ್ಯನಪಾಳ್ಯ,ವೀರದಿಪ್ಪಯ್ಯನಪಾಳ್ಯ, ಕಿಲ್ಲಾರಲಹಳ್ಳಿ, ದಡಿಗಟ್ಟಮಡಗು,ಗೌಡನಕುಂಟೆ,ತಾಂಡ ಗ್ರಾಮಗಳು ಸೇರಿದಂತೆ ಸುಮಾರು ಇಪ್ಪತ್ತಕ್ಕು ಹೆಚ್ಚು ಗ್ರಾಮಗಳಿಗೆ ಈ ರಸ್ತೆಯ ಮುಖ್ಯರಸ್ತೆಯಾಗಿರುವ ಕಾರಣ ಸುಮಾರು ನಾಲ್ಕು ಸಾವಿರಕ್ಕು ಹೆಚ್ಚು ಜನಸಂಖ್ಯೆ ಈ ರಸ್ತೆಯ ಅವ್ಯವಸ್ಥೆಯಿಂದ ಪರಿತಪ್ಪಿಸುತಿರುವುದು ಯಾವೊಬ್ಬ ಜನಪ್ರತಿನಿದಿಯ ಗಮನಕ್ಕೆ ಬಾರದಿರುವುದು ವಿಪರ್ಯಾಸ.

ನಿರ್ವಹಣೆ ಕೊರತೆಯಿಂದ ರಸ್ತೆ ಹಾಳು

2006ರಲ್ಲಿ ನಬಾರ್ಡ್ ಯೋಜನೆಯಡಿಯಲ್ಲಿ ಡಾಂಬರೀಕರಣವಾದ ನಂತರ ಸೂಕ್ತವಾದ ನಿರ್ವಹಣೆ ಮಾಡುವಲ್ಲಿ ಬೇಜವಬ್ದಾರಿ ತೋರಿದ ಅಧಿಕಾರಿಗಳು ದೊಡ್ಡಬಳ್ಳಾಪುರ ರಸ್ತೆಗಳ ಮುಖಪುಟದಲ್ಲಿ ಈ ರಸ್ತೆಯನ್ನು ಸಂಪೂರ್ಣವಾಗಿ ಮರೆತಿರುವಂತೆ ರಸ್ತೆ ಸಂಪೂರ್ಣ ಗುಂಡಿಮಯವಾಗಿ ಹಾಳುಬಿದ್ದಿದೆ.

ರಸ್ತೆಯಲ್ಲಿರುವ ಮೋರಿಗಳು ಕುಸಿದು ವರ್ಷಗಳೇ ಕಳೆದಿದ್ದು ದಿನ ನಿತ್ಯ ಒಂದಲ್ಲಾ ಒಂದು ವಾಹನ ಅಪಘಾತಕ್ಕೀಡಾಗಿ ಪ್ರಯಾಣಿಕರ ಪ್ರಾಣಹರಣಕ್ಕೆ ಕಾರಣವಾಗುತ್ತಿದೆ ಆದರೂ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳಿಗೆ ಜಿಪಂ ಅನುಧಾನ ಈ ರಸ್ತೆಗೆ ಸಾಕಾಗುತ್ತಿಲ್ಲ ಎಂದು ನುಣಿಚಿಕೊಳ್ಳುತ್ತಾರೆಯೇ ಹೊರತು ಕಾಳಜಿವಹಿಸಿ ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಸೇರಿಸುವ ಮೂಲಕ ಉತ್ತಮ ರಸ್ತೆ ಕಾಮಗಾರಿ ನಡೆಸಬೇಕೆಂಬ ಕನಿಷ್ಟ ಪ್ರಜ್ಞೆಯು ಇಲ್ಲವಾಗಿದೆ.

ಇದೇ ಪಾಳು ಬಿದ್ದ ರಸ್ತೆಯಲ್ಲಿ ಸಾಗುವ ಘಟಾನುಘಟಿ ಜನ ಪ್ರತಿನಿಧಿಗಳು..!

ಇನ್ನು ಈ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಯಾವುದೇ ಅಧಿಕಾರವಿಲ್ಲದ ಸಾಮಾನ್ಯ ಜನ ಪ್ರತಿನಿಧಿಗಳು ಇದ್ದಾರೆನ್ನುವಂತೆಯೂ ಇಲ್ಲ.ಜಿಲ್ಲಾಪಂಚಾಯಿತಿ ಅಧ್ಯಕ್ಷೆಯಿಂದ ಹಿಡಿದು ತಾಪಂ ಉಪಾಧ್ಯಕ್ಷೆ, ಎಪಿಎಂಸಿ ಅಧ್ಯಕ್ಷ, ಮೂರ್ ನಾಕು ಜನ ತಾಪಂ, ಮಾಜಿ ಅಧ್ಯಕ್ಷರು,ಪ್ರಭಾವಿ ವಿರೋಧ ಪಕ್ಷದ ನಾಯಕರುಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಾರಾದರೂ ಅವರುಗಳಿಗೆ ಈ ರಸ್ತೆಗೆ ಸೂಕ್ತ ಕಾಯಕಲ್ಪ ದೊರಕಿಸಬೇಕೆಂಬ ಕಾಳಜಿಯೇ ಇಲ್ಲವಾಗಿದೆ ಎಂಬುದು ಈ ವ್ಯಾಪ್ತಿಯ ಜನರ ಕೊರಗು.

ನೋಟು ರದ್ದತಿ ಅಡ್ಡಿಯಾಯ್ತೇ..ಕಾಮಗಾರಿಗೆ..!

ಕಳೆದ ಮೈತ್ರಿ ಸರ್ಕಾರದ ಸಮಯದಲ್ಲಿ ಈ ರಸ್ತೆ ಕಾಮಗಾರಿಗೆಂದು ಬಿಡುಗಡೆಯಾಗಿದ್ದ, ಸುಮಾರು ಎರಡು ಕೋಟಿಗೂ ಹೆಚ್ಚು ಅನುದಾನವನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿದೆ ಎಂಬ ಆರೋಪ ಶಾಸಕರಾದಿಯಾಗಿ ಸ್ಥಳೀಯ ಜನ ಪ್ರತಿನಿಧಿಗಳದ್ದಾದರೆ.ಮತ್ತೆ ಸರ್ಕಾರ ತಡೆ ಹಿಡಿದರೆ ಜನಪರ ಹೊತ್ತಿರುವ ನಿಮಗೆ ಅನುದಾನವನ್ನು ಬಿಡುಗಡೆ ಮಾಡಿಸುವ ಜವಬ್ದಾರಿಯಿಲ್ಲವೆ ಎಂಬ ಪ್ರಶ್ನೆ ಸ್ಥಳೀಯರದ್ದು. 

ತೇಪೆ ಕಾರ್ಯಕ್ಕೆ ಲಕ್ಷಾಂತರ ಹಣ..?

ಚುನಾವಣೆ ಸಂದರ್ಭದಲ್ಲಿ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಈ ರಸ್ತೆಯ ಮೇಲೆ ಕೆಲವರಿಗೆ ಎಲ್ಲಿಲ್ಲದ ಪ್ರೀತಿ ಬಂದುಬಿಡುತ್ತದೆ.ಸುಮಾರು 14.5ಕಿಮಿ ರಸ್ತೆಗೆ ಶಾಶ್ವತ ಕಾಮಗಾರಿ ನಡೆಸದೆ ಜಿಪಂ,ತಾಪಂ ಅನುಧಾನದಲ್ಲಿ ಅದೇಷ್ಟು ಸಲ  ಗುಂಡಿಗಳಿಗೆ ಮಣ್ಣು ತುಂಬಿ ಲಕ್ಷಾಂತರ ಹಣ ವೆಚ್ಚಮಾಡಿದ್ದಾರೋ.ಇದರ ಗುತ್ತಿಗೆ ಪಡೆದ ಆ ಗುತ್ತಿಗೆದಾರರನ ಅದೃಷ್ಟ ಹೇಳತೀರದು.

ಇತ್ತೀಚೆಗೆ ಸ್ಥಳೀಯರ ಆಕ್ರೋಶ ಹೆಚ್ಚಾದ ಹಿನ್ನಲೆ ಕೆಲ ಅನುಧಾನದಲ್ಲಿ ದಡಿಗಟ್ಟಮಡಗು – ಗೌಡನಕುಂಟೆ ವರೆಗೆ ಡಾಂಬಾರ್ ಕಾಮಗಾರಿ ನಡೆಸಿದ್ದರೆ ಲಿಂಗಧೀರನಹಳ್ಳಿ – ಪಚ್ಚಾರನಹಳ್ಳಿಯವರೆಗೆ ಕೆಲವೇ ಕಿಲೋ ಮೀಟರ್ ರಸ್ತೆ ಕಾಮಗಾರಿ ನಡೆಸಿದ್ದು ಅದೂ ಸಹ ಕಳಪೆ ಕಾಮಗಾರಿಯಿಂದ ಹಾಳಾಗಿದೆ ಎಂಬುದು ಸ್ಥಳೀಯರ ಆಕ್ರೋಶವಾಗಿದೆ.

ಒಟ್ಟಾರೆ ಜವಬ್ದಾರಿ ಮರೆತು ಮತ ಚಲಾಯಿಸಿದರೆ ಏನಾಗುತ್ತದೆ ಎಂಬುದಕ್ಕೆ ಸ್ಥಳೀಯ ಜನತೆ ಬಹು ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಲೇ ಬರುತ್ತಿರುವುದು ಸಾಕ್ಷಿಯಾಗಿದೆ.

ಕನಿಷ್ಠ ಸ್ಥಳೀಯ ಗ್ರಾಮಗಳಿಗಲ್ಲದೆ ನಂದಿ ಬೆಟ್ಟ,ಎಸ್.ಎಸ್.ಘಾಟಿ,ಗೊರವನಹಳ್ಳಿ ಲಕ್ಷ್ಮೀದೇವಾಲಯ ಸಂಪರ್ಕ ಕಲ್ಪಿಸುವ ಮೂಲಕ ಪ್ರವಾಸೋಧ್ಯಮಕ್ಕೂ ಒತ್ತು ಸಿಗುವುದು ಎಂದು….? ಎಷ್ಟು ಸರಿ  ಕಿಂದರಿ ಬಾರಿಸುತ್ತಲೇ ಇರುವುದು ತಿಳಿಯದಾಗಿದೆ.

ರಾಜಕೀಯ

ಹಾವು ಬಿಡ್ತೀನಿ ಅಂತೇಳಿ ಹಾವ್ರಾಣಿ ಬಿಟ್ಟ ರಾಜಣ್ಣ..!

ಹಾವು ಬಿಡ್ತೀನಿ ಅಂತೇಳಿ ಹಾವ್ರಾಣಿ ಬಿಟ್ಟ ರಾಜಣ್ಣ..!

ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ದಾಖಲೆಗಳಿಲ್ಲ. ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಸಿಸಿ ಕ್ಯಾಮರಾ ಇಲ್ಲ. Rajanna

[ccc_my_favorite_select_button post_id="104571"]
ಕರ್ನಾಟಕದ ರಫ್ತು: 100 ಬಿಲಿಯನ್ ಡಾಲರ್ ಗೆ ಹೆಚ್ಚಿಸುವ ಬಗ್ಗೆ ಚರ್ಚೆ; ಎಂಬಿ ಪಾಟೀಲ

ಕರ್ನಾಟಕದ ರಫ್ತು: 100 ಬಿಲಿಯನ್ ಡಾಲರ್ ಗೆ ಹೆಚ್ಚಿಸುವ ಬಗ್ಗೆ ಚರ್ಚೆ; ಎಂಬಿ

`ರಾಜ್ಯದ ಕೈಗಾರಿಕಾ ವಲಯವು ಸದ್ಯಕ್ಕೆ ವಾರ್ಷಿಕವಾಗಿ 27 ಬಿಲಿಯನ್ ಡಾಲರ್ ಮೌಲ್ಯದ ರಫ್ತು ವಹಿವಾಟನ್ನು ಮಾತ್ರ ನಡೆಸುತ್ತಿದೆ. ಇದನ್ನು 100 ಬಿಲಿಯನ್ ಡಾಲರ್ ಮಟ್ಟಕ್ಕೆ ಕೊಂಡೊಯ್ಯಬೇಕು ಎನ್ನುವುದು ನಮ್ಮ ಗುರಿಯಾಗಿದೆ. MB Patila

[ccc_my_favorite_select_button post_id="104564"]
ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಬೆಂಗಳೂರು; ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರನ್ನು ಭೇಟಿಯಾದರು. ಈ ವೇಳೆ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ

[ccc_my_favorite_select_button post_id="104024"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕಿಂಗ್ ಕೊಹ್ಲಿಗೆ ಗೆಳೆಯ ಎಬಿಡಿ ಕಿವಿಮಾತು

ಕಿಂಗ್ ಕೊಹ್ಲಿಗೆ ಗೆಳೆಯ ಎಬಿಡಿ ಕಿವಿಮಾತು

ಬೆಂಗಳೂರು: IPLಗೆ ಕ್ಷಣಗಣನೆ ಆಭವಾಗಿದ್ದು, ಕ್ರಿಕೆಟ್ ಜ್ವರ ವ್ಯಾಪಿಸುತ್ತಿದೆ. ಈ ನಡುವೆ ಆರ್‌ಸಿಬಿಯ ಮಾಜಿ ಆಟಗಾರ, ದಕ್ಷಿಣಆಫ್ರಿಕಾದ ಮೂಲದ ಎಬಿ.ಡಿ ವಿಲ್ಲಿಯರ್ಸ್ (ABD) ವಿರಾಟ್ ಕೊಹ್ಲಿಗೆ (Virat Kohli) ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ‘ವಿರಾಟ್

[ccc_my_favorite_select_button post_id="104303"]

ಫೆ.28 ರಂದು ಮಹಿಳಾ ಕ್ರೀಡಾಕೂಟ

[ccc_my_favorite_select_button post_id="103061"]

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]
ಮಾತೃ ನಿಂದನೆ ಮಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಹೇಳಿದ್ದು ಭಾರತ್ ಮಾತಾ ಕಿ ಜೈ..!| Video

ಮಾತೃ ನಿಂದನೆ ಮಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಹೇಳಿದ್ದು ಭಾರತ್ ಮಾತಾ ಕಿ ಜೈ..!|

ಹಾವೇರಿ: ದೇಶ, ಧರ್ಮ, ಗೋಮಾತೆ, ಮಾತೆಯರ ಕುರಿತು ಗೌರವಯುತ ಸಿದ್ದಾಂತ ಹೊಂದಿರುವ ಬಿಜೆಪಿ (BJP)ಯ ಜಿಲ್ಲಾ ಅಧ್ಯಕ್ಷನೋರ್ವ ಮಾತೃ ನಿಂದನೆ ಮಾಡಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕುರಿತು ಪ್ರತಿಭಟನೆ ವೇಳೆ ಅಸಭ್ಯ ಪದ ಬಳಸಿದ್ದು ಸಾರ್ವಜನಿಕ ವಲಯದಲ್ಲಿ

[ccc_my_favorite_select_button post_id="104539"]
ವಾಹನಗಳ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು

ವಾಹನಗಳ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು

ಗೌರಿಬಿದನೂರು: ಶಾಲಾ ವಾಹನ ಮತ್ತು ದ್ವಿಚಕ್ರ, ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ (Accident) ಇಬ್ಬರು ದ್ವಿಚಕ್ರ ವಾಹನ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಹಿಂದೂಪುರ ಬೈಪಾಸ್ ರಸ್ತೆಯ ನರಿಂಗ್ ಕಾಲೇಜು ಮುಂಭಾಗದಲ್ಲಿ

[ccc_my_favorite_select_button post_id="104484"]

ಆರೋಗ್ಯ

ಸಿನಿಮಾ

ನಟ ದರ್ಶನ್ ಭಗವತಿ ದೇವಾಲಯಕ್ಕೆ ಭೇಟಿ.. ಕೆಲ ಖಾಸಗಿ ನ್ಯೂಸ್ ಚಾನಲ್‌ಗಳಿಗೆ ಢವಢವ

ನಟ ದರ್ಶನ್ ಭಗವತಿ ದೇವಾಲಯಕ್ಕೆ ಭೇಟಿ.. ಕೆಲ ಖಾಸಗಿ ನ್ಯೂಸ್ ಚಾನಲ್‌ಗಳಿಗೆ ಢವಢವ

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Darshan) ಕೇರಳದ ಕಣ್ಣೂರಿನಲ್ಲಿರುವ ಮಡಾಯಿ ಶ್ರೀ ತಿರುವರ್ಕ್ಕಾಟ್ಟು ಕಾವು ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ ಎನ್ನಲಾದ ಕೆಲವೇ ಸೆಕೆಂಡ್ ಗಳ ವಿಡಿಯೋ ಕೆಲ

[ccc_my_favorite_select_button post_id="104465"]
error: Content is protected !!