ಹಾಸನ; ಬಿಜೆಪಿ (BJP) ಜೊತೆಗಿನ ಮೈತ್ರಿ ಜೆಡಿಎಸ್ ನ (JDS) ಒಪ್ಪಿ ಸಾಗಿದರು, ಬಿಜೆಪಿಗರು ಮೈತ್ರಿ ಧರ್ಮವನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ ಎಂಬ ಆರೋಪದ ನಡುವೆಯೇ ಭದ್ರಕೋಟೆಯಂತಿದ್ದ ಹಾಸನದಲ್ಲಿ ಬಿಜೆಪಿ ಕೈಕೊಟ್ಟ ಪರಿಣಾಮ ಮತ್ತೊಮ್ಮೆ ಜೆಡಿಎಸ್ ಗೆ ಹಿನ್ನಡೆಯಾಗಿದೆ.
ಹಾಸನದ ನಗರಸಭೆ ಹಾಲಿ ಅಧ್ಯಕ್ಷ ಎಂ. ಚಂದ್ರೇಗೌಡ ವಿರುದ್ಧ ಜೆಡಿಎಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯ ವಿಫಲವಾಗಿದೆ.
ಸದ್ಯ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಆದರೆ, ಹಾಸನದಲ್ಲಿ ಮಾತ್ರ ಎಲ್ಲವೂ ತದ್ವಿರುದ್ಧ ಬಿಜೆಪಿಯ ಕಾರಣದಿಂದಲೇ ಈ ಅವಿಶ್ವಾಸ ನಿರ್ಣಯದಲ್ಲಿ ಜೆಡಿಎಸ್ ವಿಫಲವಾಗಿದೆ.
ಸೋಮವಾರ ಹಾಸನದ ಕುವೆಂಪು ಸಭಾಂಗಣದಲ್ಲಿ ಮತದಾನ ನಡೆದಿದ್ದು ಅವಿಶ್ವಾಸ ನಿರ್ಣಯಕ್ಕೆ ಬೇಕಾದ 26 ಸದಸ್ಯರ ಬೆಂಬಲ ಪಡೆಯಲು ಜೆಡಿಎಸ್ ವಿಫಲವಾಗಿದೆ. ಜೆಡಿಎಸ್ ಗೆ ಲಭ್ಯವಾಗಿರುವುದು ಕೇವಲ 21 ಮತಗಳು ಮಾತ್ರ. ಹೀಗಾಗಿ ಜೆಡಿಎಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯ ವಿಫಲವಾಗಿದೆ.
ಹಾಲಿ ಅಧ್ಯಕ್ಷ ಎಂ ಚಂದ್ರೇಗೌಡರ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು 13 ಮತಗಳ ಅವಶ್ಯಕತೆ ಇತ್ತು. ಆದರೆ ಬಿಜೆಪಿಯ 13 ಸದಸ್ಯರು ಕೂಡ ಜೆಡಿಎಸ್ ಮಣಿಸಿದ್ದ ಅವಿಶ್ವಾಸ ನಿರ್ಣಯದ ವಿರುದ್ಧ ಮತ ಹಾಕಿದ್ದಾರೆ. ಇದರಿಂದ ಕಾಂಗ್ರೆಸ್ & ಬಿಜೆಪಿ ಸೇರಿ 16 ಮತಗಳು ಅವಿಶ್ವಾಸದ ವಿರುದ್ಧ ಚಲಾವಣೆ ಆಗಿದೆ.
ಇದರಿಂದ ಹಾಲಿ ಅಧ್ಯಕ್ಷ ಚಂದ್ರೇಗೌಡ ಸ್ಥಾನ ಭದ್ರವಾಗಿದೆ.
ಇನ್ನು ಕಾಂಗ್ರೆಸ್ ಸಂಸದ ಶ್ರೇಯಸ್ ಪಟೇಲ್ ಕೂಡ ಜೆಡಿಎಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ವಿರುದ್ಧವಾಗಿ ತಮ್ಮ ಮತ ಚಲಾಯಿಸಿದ್ದು ಹಾಲಿ ಅಧ್ಯಕ್ಷ ಚಂದ್ರೇಗೌಡ ಪರವಾಗಿ ಮತ ಹಾಕಿದ್ದಾರೆ. ಹೀಗಾಗಿ ಜೆಡಿಎಸ್ ತನ್ನದೇ ಭದ್ರಕೋಟೆಯಲ್ಲಿ ರಾಜಕೀಯ ದಾಳಕ್ಕೆ ಸಿಲುಕಿ ಒದ್ದಾಡುವಂತಾಗಿದೆ.