ದೊಡ್ಡಬಳ್ಳಾಪುರದಲ್ಲಿ ಮರ ಉರುಳಿ ಬಿದ್ದು ಆಟೋ ಜಖಂ

ದೊಡ್ಡಬಳ್ಳಾಪುರ : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿಯ ಭಗತ್‌ಸಿಂಗ್ ಕ್ರೀಡಾಂಗಣದ ಮುಂಭಾಗದಲ್ಲಿದ್ದ ಮೇ ಪ್ಲವರ್ ಮರವೊಂದು ಉರುಳಿ ಬಿದ್ದ ಪರಿಣಾಮ ಎರಡು ಆಟೋಗಳು ಜಖಂ ಗೊಂಡಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಸರ್ಕಾರಿ ಪದವಿ ಪೂರ್ವ ಕಾಲೇಜು ಆಟೋ ನಿಲ್ದಾಣದಲ್ಲಿ ಮಧ್ಯಾಹ್ನ ೩.೩೦ರ ವೇಳೆಯಲ್ಲಿ ಆಟೋ ಚಾಲಕರು ಎಂದಿನಂತೆ ಆಟೋ ನಿಲ್ಲಿಸಿ, ಹೊರಗಡೆ ಕುಳಿತಿದ್ದರು. ನೋಡು ನೋಡುತ್ತಿದ್ದಂತೆಯೇ ದೊಡ್ಡ ಮೇಪ್ಲವರ್ ಮರವೊಂದು ಬುಡ ಸಮೇತ ಉರುಳಿ ಬಿದ್ದಿದೆ. 

ಅಸ್ಲಾಂ ಪಾಷಾ ಅವರಿಗೆ ಸೇರಿದ ಆಟೋ ಪೂರ್ಣ ಜಖಂ ಆಗಿದ್ದು, ಚಾಂದ್ ಅವರ ಆಟೋಗೆ ಸ್ಪಲ್ಪ ಮಟ್ಟಿನ ಹಾನಿಯಾಗಿದೆ ತಕ್ಷಣವೇ ಆಟೋ ಚಾಲಕರು ಸ್ಥಳದಿಂದ ಓಡಿ ಹೋಗಿದ್ದರಿಂದ ಆಗಬಹುದಾದ ಪ್ರಾಣ ಹಾನಿ ತಪ್ಪಿದೆ. ಮಳೆ ಅಥವಾ ಗಾಳಿ ಬೀಸದಿದ್ದರೂ ಬೃಹತ್ ಮರವೊಂದು ಉರುಳಿ ಬಿದ್ದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಮರದ ಬುಡ ಗೆದ್ದಲು ತಿಂದಿದ್ದು, ಮರದಲ್ಲಿ ಯಾವುದೇ ಸತ್ವವಿಲ್ಲದೇ ಉರುಳಿ ಬಿದ್ದಿದೆ.

ನಗರದಲ್ಲಿ ಈ ರೀತಿಯ ಒಣಗಿದ ಅಥವಾ ಸತ್ವ ಹೀನ ಮರಗಳನ್ನು ಗುರುತಿಸಿ ಸ್ಥಳೀಯ ಆಡಳಿತ ಹಾಗೂ ಅರಣ್ಯ ಇಲಾಖೆ ತೆರವು ಮಾಡುವಂತೆ ಮನವಿ ಮಾಡಿದ್ದರೂ ಸಂಬಂಧಪಟ್ಟವರು  ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ರಾಜಕೀಯ

ಬಮೂಲ್ ನಿರ್ದೇಶಕರಾಗಿ ಡಿಕೆ ಸುರೇಶ್‌ ಅವಿರೋಧ ಆಯ್ಕೆ

ಬಮೂಲ್ ನಿರ್ದೇಶಕರಾಗಿ ಡಿಕೆ ಸುರೇಶ್‌ ಅವಿರೋಧ ಆಯ್ಕೆ

ಕನಕಪುರ ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಮಾಜಿ ಸಂಸದ ಡಿಕೆ ಸುರೇಶ್ (DK Suresh) ಅವರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

[ccc_my_favorite_select_button post_id="107438"]
ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ‘ಭೂ ಗ್ಯಾರಂಟಿ’ ಯೋಜನೆ: ಡಿಸಿಎಂ ಡಿಕೆ ಶಿವಕುಮಾರ್

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ‘ಭೂ ಗ್ಯಾರಂಟಿ’ ಯೋಜನೆ: ಡಿಸಿಎಂ ಡಿಕೆ ಶಿವಕುಮಾರ್

“ರಾಜ್ಯ ಸರ್ಕಾರ ಕೇವಲ ಎರಡು ವರ್ಷದ ಸಂಭ್ರಮಾಚರಣೆ ಮಾಡುತ್ತಿಲ್ಲ. ಜನರಿಗೆ ‘ಭೂ ಗ್ಯಾರಂಟಿ’ (Land Guarantee) ಯೋಜನೆ: ಡಿಸಿಎಂ ಡಿಕೆ ಶಿವಕುಮಾರ್ (DK Shivakumar)

[ccc_my_favorite_select_button post_id="107434"]
ಆಪರೇಷನ್ ಸಿಂಧೂರ: ಪಾಕ್‌ಗೆ ಕೇಂದ್ರ ಸರ್ಕಾರದಿಂದಲೇ ಮಾಹಿತಿ: ಜೈಶಂಕ‌ರ್ Video ಪೋಸ್ಟ್ ಮಾಡಿದ ರಾಹುಲ್‌ ಗಾಂಧಿ

ಆಪರೇಷನ್ ಸಿಂಧೂರ: ಪಾಕ್‌ಗೆ ಕೇಂದ್ರ ಸರ್ಕಾರದಿಂದಲೇ ಮಾಹಿತಿ: ಜೈಶಂಕ‌ರ್ Video ಪೋಸ್ಟ್ ಮಾಡಿದ

ಉಗ್ರರ ದಾಳಿ ಬೆನ್ನಲ್ಲೇ ಪಾಕಿಸ್ತಾನದ ಉಗ್ರರ ಅಡಗುತಾಣಗಳ ಗುರಿಯಾಗಿಸಿ ನಡೆಸಿದ 'ಆಪರೇಷನ್ ಸಿಂಧೂರ' (Operation Sindoora) ದಾಳಿ ಕುರಿತು ಕೇಂದ್ರ ಸರ್ಕಾರ ಮುಂಚಿತವಾಗಿಯೆ ಪಾಕಿಸ್ತಾನಕ್ಕೆ ಮಾಹಿತಿ

[ccc_my_favorite_select_button post_id="107328"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕುಟುಂಬದೊಂದಿಗೆ ತಿಮ್ಮಪ್ಪನ ದರ್ಶನ ಪಡೆದ ಗೌತಮ್ ಗಂಭೀರ್

ಕುಟುಂಬದೊಂದಿಗೆ ತಿಮ್ಮಪ್ಪನ ದರ್ಶನ ಪಡೆದ ಗೌತಮ್ ಗಂಭೀರ್

ಭಾರತದ ಕ್ರಿಕೆಟ್ ತಂಡದ ತರಬೇತುದಾರ ಗೌತಮ್ ಗಂಭೀರ್ (Gautam Gambhir) ಅವರು ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

[ccc_my_favorite_select_button post_id="107331"]
ನಡುರಸ್ತೆಯಲ್ಲೇ ಯುವಕನ ಕೊಲೆ..!

ನಡುರಸ್ತೆಯಲ್ಲೇ ಯುವಕನ ಕೊಲೆ..!

ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಯುವಕ ನೋರ್ವನನ್ನು ಬರ್ಬರ ವಾಗಿ ಕೊಲೆ (Murder) ಮಾಡಲಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.

[ccc_my_favorite_select_button post_id="107389"]
ಆಂಧ್ರದಲ್ಲಿ ಮತ್ತೆ ಅಪಘಾತ: ಪ್ರವಾಸಕ್ಕೆ ತೆರಳಿದ್ದ ಬಿಜೆಪಿ ಮುಖಂಡ ಸೇರಿ ಕರ್ನಾಟಕದ ಮೂವರು ಸಾವು

ಆಂಧ್ರದಲ್ಲಿ ಮತ್ತೆ ಅಪಘಾತ: ಪ್ರವಾಸಕ್ಕೆ ತೆರಳಿದ್ದ ಬಿಜೆಪಿ ಮುಖಂಡ ಸೇರಿ ಕರ್ನಾಟಕದ ಮೂವರು

ನಿನ್ನೆಯಷ್ಟೇ ಚಿಕ್ಕಬಳ್ಳಾಪುರ ಜಿಲ್ಲೆಯ ಮೂವರು ಆಂಧ್ರ ಪ್ರದೇಶದಲ್ಲಿ (Andra Pradesh) ನಡೆದ ಕಾರು ಅಪಘಾತದಲ್ಲಿ (Accident) ಸಾವನಪ್ಪಿರುವ ಬೆನ್ನಲ್ಲೇ,

[ccc_my_favorite_select_button post_id="107407"]

ಆರೋಗ್ಯ

ಸಿನಿಮಾ

ಮುಸ್ಸಂಜೆ ಮಾತು ಸಿನಿಮಾಗೆ 17 ವರ್ಷ: ನಟ ಸುದೀಪ್ ಹೇಳಿದ್ದು ಇಷ್ಟು| Video ನೋಡಿ

ಮುಸ್ಸಂಜೆ ಮಾತು ಸಿನಿಮಾಗೆ 17 ವರ್ಷ: ನಟ ಸುದೀಪ್ ಹೇಳಿದ್ದು ಇಷ್ಟು| Video

ಕಿಚ್ಚ ಸುದೀಪ್ (Sudeep) ಮತ್ತು ರಮ್ಯ (Ramya )ಅಭಿನಯದ ಯಶಸ್ವಿ ಚಿತ್ರ ಮುಸ್ಸಂಜೆ ಮಾತು (Mussanje Mathu) ಸಿನಿಮಾ ಬಿಡುಗಡೆಯಾಗಿ ಇಂದಿಗೆ 17 ವರ್ಷ.

[ccc_my_favorite_select_button post_id="107204"]
error: Content is protected !!