ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಿಗೆ ಲಾಕ್ ಡೌನ್ ನಂತರ ಶಾಲಾ ಕಾಲೇಜುಗಳು ಆರಂಭವಾದ ಸಂತಸ ಒಂದೆಡೆಯಾದರೆ, ಶಾಲೆ – ಕಾಲೇಜು ಆರಂಭವಾದ ಹೊಸತರಲ್ಲೇ ಸಾರಿಗೆ ಬಸ್ ಗಳಿಗೆ ಪರದಾಡುವ ಅನಿವಾರ್ಯತೆ ಮತ್ತೊಂದೆಡೆ ಎದುರಾಗಿದೆ.
ತಾಲೂಕಿನ ಕೊಟ್ಟಿಗೆಮಂಚೇನಹಳ್ಳಿಯಿಂದ ಹೊಸಹಳ್ಳಿ, ಗುಂಡಮಗೆರೆ ಮಾರ್ಗವಾಗಿ ದೊಡ್ಡಬಳ್ಳಾಪುರಕ್ಕೆ ಸಾಗುವ ಸಾರಿಗೆ ಬಸ್ಸಿನಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಗಬೇಕಾದ ಅನಿವಾರ್ಯತೆ ಎದುರಾಗಿದ್ದು, ಪ್ರತಿನಿತ್ಯ ಬೆಳಿಗ್ಗೆ ವಿದ್ಯಾರ್ಥಿಗಳಿಗೆ ಇದೇ ಚಿಂತೆಯಾಗಿ ಪರಿಣಮಿಸುತ್ತಿದೆ.
ಲಾಕ್ ಡೌನ್ ತೆರವಿನ ನಂತರ ಗ್ರಾಮೀಣ ಪ್ರದೇಶದ ಬಸ್ ಸಂಚಾರದಲ್ಲಿ ಏರುಪೇರಾಗಿದೆ. ಸಮಯಕ್ಕೆ ಬರುತ್ತಿದ್ದ ಬಸ್ಸುಗಳು ಲಾಕ್ ಡೌನ್ ತೆರವಿನ ನಂತರ ಬರುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲು. ಅಲ್ಲದೆ ಬಸ್ ನಲ್ಲಿ ಜನದಟ್ಟಣೆ ಇಂದ ತರಗತಿಗಳಿಗೆ ವಿಳಂಬವಾಗುತ್ತಿದೆ.
ಲಾಕ್ ಡೌನ್ ತೆರವಿನ ನಂತರ ಶಾಲಾ ಕಾಲೇಜುಗಳು ಆರಂಭವಾಗಿದ್ದು, ಪ್ರತಿನಿತ್ಯ ಸಾರಿಗೆ ಬಸ್ ಗಳ ಸಂಚಾರ ಕೊರತೆಯಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ, ಕೂಡಲೇ ಸಾರಿಗೆ ಅಧಿಕಾರಿಗಳು ಸ್ಪಂದಿಸಿ, ಹೆಚ್ಚುವರಿ ಬಸ್ ನೀಡಬೇಕಿದೆ. ಇಲ್ಲವಾದಲ್ಲೊ ಎಲ್ಲಾ ವಿದ್ಯಾರ್ಥಿಗಳು ಕೆ.ಎಸ್.ಆರ್.ಟಿ.ಸಿ ಬಸ್ ಘಟಕದ ಬಳಿ ಮುಷ್ಕರ ನಡೆಸಲಾಗುವುದು ಎಂದು ವಿದ್ಯಾರ್ಥಿ ನವೀನ್ ಹರಿತಲೇಖನಿಗೆ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..