ರೋಜಿಪುರದ ಸ್ಮಶಾನದಲ್ಲಿ ಮೌಢ್ಯ, ಕಂದಾಚಾರಗಳ ವಿರುದ್ಧ ಜಾಗೃತಿ ಸಮಾವೇಶ

ದೊಡ್ಡಬಳ್ಳಾಪುರ: ದಲಿತರಿಗೆ ಸ್ವಾತಂತ್ರ್ಯ ಮತ್ತು ಸ್ವಾಭಿಮಾನ ತಂದುಕೊಟ್ಟ ಅಂಬೇಡ್ಕರ್‌ ಅವರ ಆಶಯಗಳು ಚಿಗುರೊಡೆದು ಮುರುಟಿ ಹೋದಂತಾಗಿದೆ. ಮೌಢ್ಯ ಮತ್ತು ಕಂದಾಚಾರಗಳು ದೈನಿಕವಾಗಿದೆ. ವಿದ್ಯುನ್ಮಾಧ್ಯಮಗಳಲ್ಲಿನಿತ್ಯ ಭವಿಷ್ಯ ವಿಜೃಂಭಿಸುತ್ತಿದೆ.  ಶಿಕ್ಷಣ ಕೂಡ ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಲು ವಿಫಲವಾಗಿದೆ ಎಂದು ದಲಿತ ಮುಖಂಡ ಮಾ.ಮುನಿರಾಜು ತಿಳಿಸಿದರು.

ನಗರದ ರೋಜಿಪುರದಲ್ಲಿನ ಸಾರ್ವಜನಿಕ ಸ್ಮಶಾನದಲ್ಲಿ ಸೋಮವಾರ ನಡೆದ ಮೌಢ್ಯ ಮತ್ತು ಕಂದಾಚಾರ ವಿರೋಧಿ ಸಮಾರಂಭದಲ್ಲಿ ಅವರು ಮಾತನಾಡಿದರು.

ದೊಡ್ಡಬಳ್ಳಾಪುರದ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಅಂಬೇಡ್ಕರ್‌ ಪರಿನಿರ್ವಾಣದ ಅಂಗವಾಗಿ ಈ ವಿಶಿಷ್ಟ ಜಾಗೃತಿ ಸಭೆಯನ್ನು ಆಯೋಜಿಸಿತ್ತು. 

ಶಿಕ್ಷಣ ಸಂಸ್ಥೆಗಳು ಪರೀಕ್ಷೆಗಳಲ್ಲಿ ಮಿಂದೇಳುತ್ತಿದೆ. ನೆನಪನ್ನು ಕಾರಿಕೊಂಡು ಬಾಯಿ ತೊಳೆದುಕೊಳ್ಳುವ ಇಲ್ಲಿನ ಪದ್ಧತಿಯಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಸಾಮಾಜಿಕ ಪ್ರಜ್ಞೆ, ಸಮಾನತೆ, ಸಮಾನ ಗೌರವ ಮೂಡಿಸುವ ಜಾಗೃತಿಗೆ ದೊಡ್ಡ ಹೋರಾಟವನ್ನು ಕಟ್ಟಬೇಕಾಗಿದೆ. 

ಪ್ರಗತಿಪರ ಚಿಂತಕ ಯೋಗೇಶ್‌ ಮಾಸ್ಟರ್‌ ಮಾತನಾಡಿ  ಯೋಗೇಶ್‌ ಮಾಸ್ಟರ್‌ಅಂಬೇಡ್ಕರ್‌ ಕೇವಲ ವ್ಯಕ್ತಿಯಲ್ಲ ಅವರೊಂದು ಚೈತನ್ಯ. ಪೂಜೆ, ಹೂವಿನ ಹಾರ ಹಾಕುವುದನ್ನು ಮರೆತರೂ  ಹೃದಯ ಮತ್ತು ನಮ್ಮ ಪ್ರಜ್ಞೆಯಲ್ಲಿರುವ  ಆ ಚೈತನ್ಯ ಶಕ್ತಿಯನ್ನು ಮರೆಯಬಾರದು, ಎಂದರು.  ‘ಅರಿವೇ ಬಾಬಾ. ಇದನ್ನು ಸದಾ ಜಗೃತವಾಗಿಟ್ಟುಕೊಳ್ಳಲು  ಅಂಬೇಡ್ಕರ್‌ ಪ್ರತಿಮೆ ಬೇಕು. ಈ ಅರಿವು ನಮ್ಮನ್ನು ಸ್ವಮುಖಿಗಳನ್ನಾಗಿಸುವುದಿಲ್ಲ. ಸಮಾಜ ಮುಖಿಗಳನ್ನಾಗಿಸುತ್ತದೆ. ಅಹಂಕಾರವೆಂಬುದು ಸ್ವಾಭಿಮಾನವಲ್ಲ. ದಕ್ಷಿಣ ಆಫ್ರಿಕಾದ ಉಡುಂಬು ಬುಡಕಟ್ಟು ಸಮುದಾಯ ನನ್ನ ಆನಂದ ನಮ್ಮ ಆನಂದದಲ್ಲಿದೆ. ನನ್ನ ಏಳಿಗೆ ನಮ್ಮ ಏಳಿಗೆಯಲ್ಲಿದೆ. ಎಲ್ಲವನ್ನೂ ನಮ್ಮ ಎಂದು ಭಾವಿಸುವುದು ಈ ಬುಡಕಟ್ಟಿನ ಮನೋಭಾವ. ಇದನ್ನು ಅಂಬೇಡ್ಕರ್‌ ನಮಗೆ  ಅವರ ವಿಚಾರದಿಂದಲ್ಲಅವರ ಜೀವನ ರೀತಿಯಿಂದಲೇ ಕಲಿಸಿದ್ದಾರೆ. ಸ್ವಾಭಿಮಾನದ ಬದುಕಿಗೆ ಜಯಿಸಿ ಕೊಟ್ಟಿದ್ದಾರೆ. ಇದನ್ನು ನಾವು ಜತನದಿಂದ ಕಾಯ್ದುಕೊಳ್ಳಬೇಕು. ಧರ್ಮ ಎಂಬುದು ದಾರಿಯೇ ಹೊರತು ಗುರಿಯಲ್ಲ. ಇದೊಂದು ನೋವು ಮತ್ತು ಬಿಕ್ಕಟ್ಟಿಗೆ ಉಪಶಮನ.ದೈವ ಎಂಬುದೊಂದು ಪರಿಕಲ್ಪನೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.  

ಪತ್ರಕರ್ತ ಕೆ.ವೆಂಕಟೇಶ್‌ ಮಾತನಾಡಿ, 1930ರಲ್ಲಿ ಬ್ರಿಟಿಷ್‌ ಸೈನಿಕರ ಸಂಖ್ಯೆ ಕೇವಲ 55 ರಿಂದ 60 ಸಾವಿರ. ಆಗ ಭಾರತದ ಜನಸಂಖ್ಯೆ 35 ಕೋಟಿ. ಇಷ್ಟೊಂದು ಕಡಿಮೆ  ಇದ್ದ  ಫರಂಗಿಗಳು  ಅಗಾಧ ಜನರನ್ನು ನಿಯಂತ್ರಿಸಲು ವೇದಾಂತವನ್ನು ರೆಜಿಮೆಂಟ್‌ ನಂತೆ ಬಳಸಿದರು. ಮ್ಯಾಕ್ಸ್‌ ಮುಲ್ಲರ್‌ ಇಡೀ ಜೀವನವನ್ನು ಮುಡಿಪಾಗಿ ಇಟ್ಟು  ಪವಿತ್ರ  ಗ್ರಂಥಗಳ 50 ಸಂಪುಟವನ್ನು  ಹೊರ ತಂದ. ಈ ಕೃತಿಗಳು ಹೇಳುವುದೇನೆಂದರೆ  ಹಿಂದಿನ ಜನ್ಮದ ಕರ್ಮ ಫಲವೇ ಈ ಜೀವನ, ಜೀವನವೇ ಬಂಧನ,  ತರ್ಕದಿಂದ ಸತ್ಯದ ಹುಡುಕಾಟ ಸಾಧ್ಯವಿಲ್ಲ ಎನ್ನುತ್ತವೆ. ಇದರ ಆಧಾರದಿಂದ ನಾವು ನಿಮ್ಮನ್ನು ಉದ್ಧರಿಸಲು, ಕತ್ತಲಲ್ಲಿರುವವರಿಗೆ ಬೆಳಕ ನೀಡಲು ಬಂದಿದ್ದೇವೆ ಎಂದು ಬ್ರಿಟಿಷರು ನಂಬಿಸಿದರು. ಈಗ ಮೌಢ್ಯ, ಮತ, ಆಹಾರ ಎಂಬ ವಿಷಯಗಳು ರೆಜಿಮೆಂಟ್‌ನಂತೆ ಬಳಕೆಯಾಗುತ್ತಿವೆ. ಎಲ್ಲರಂಗಗಳಲ್ಲೂ ಪ್ರಜಾಪ್ರಭುತ್ವ ಶಿಥಿಲವಾಗುತ್ತಿದೆ.  ಇದನ್ನು ಮೇಲೆತ್ತಲು ಅಂಬೇಡ್ಕರ್‌ ಶ್ರಮಿಸಿದರು. ದಲಿತರ ಜೀವನ, ಸ್ವಾಭಿಮಾನಕ್ಕಾಗಿ ಅವರು ನಡೆಸಿದ ಹೋರಾಟಕ್ಕೆ ಎಣೆಯೇ ಇಲ್ಲ ಎಂದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ಮುಖ್ಯಮಂತ್ರಿ ಬದಲಾವಣೆ ಖಚಿತ, ಸಿದ್ದರಾಮಯ್ಯ ಕೇಂದ್ರಕ್ಕೆ ಹೋಗುವುದು ಗ್ಯಾರಂಟಿ: ಆರ್‌.ಅಶೋಕ

ಮುಖ್ಯಮಂತ್ರಿ ಬದಲಾವಣೆ ಖಚಿತ, ಸಿದ್ದರಾಮಯ್ಯ ಕೇಂದ್ರಕ್ಕೆ ಹೋಗುವುದು ಗ್ಯಾರಂಟಿ: ಆರ್‌.ಅಶೋಕ

ಮುಖ್ಯಮಂತ್ರಿ ಹುದ್ದೆಗೆ ಎರಡೂವರೆ ವರ್ಷಗಳ ಅಗ್ರಿಮೆಂಟ್‌ ನಡೆದಿದ್ದು, ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಕ್ಕಿಳಿಸಲು ಸಿದ್ಧತೆ ನಡೆದಿದೆ; ಆರ್‌.ಅಶೋಕ (R.Ashoka) ಹೇಳಿದರು.

[ccc_my_favorite_select_button post_id="110676"]
ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ (Bamul) ನಿರ್ದೇಶಕ ಸ್ಥಾನಕ್ಕೆ ದೊಡ್ಡಬಳ್ಳಾಪುರದಿಂದ ವಿಜೇತರಾದ ಬಿ.ಸಿ.ಆನಂದ್ ಕುಮಾರ್ (B.C.Ananad Kumar) ಅವರನ್ನು ಬಿ.ವೈ.ವಿಜಯೇಂದ್ರ (B.Y.Vijayendra)

[ccc_my_favorite_select_button post_id="110404"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಎಚ್ಚರ.. ಗೌರಿಬಿದನೂರಿನಲ್ಲಿ ದರೋಡೆಕೋರರ ಆತಂಕ..!| Video ನೋಡಿ

ಎಚ್ಚರ.. ಗೌರಿಬಿದನೂರಿನಲ್ಲಿ ದರೋಡೆಕೋರರ ಆತಂಕ..!| Video ನೋಡಿ

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು (Gauribidanur) ನಗರದಲ್ಲಿ ದರೋಡೆ ಗ್ಯಾಂಗ್ ಓಡಾಟ ನಡೆಸಿರುವುದು ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದೆ.

[ccc_my_favorite_select_button post_id="110671"]
ಬ್ರೇಕ್ ಫೇಲ್: 5 ಬಸ್ಸುಗಳ ನಡುವೆ ಅಪಘಾತ.. 6 ಭಕ್ತರಿಗೆ ಗಂಭೀರ ಪೆಟ್ಟು..!

ಬ್ರೇಕ್ ಫೇಲ್: 5 ಬಸ್ಸುಗಳ ನಡುವೆ ಅಪಘಾತ.. 6 ಭಕ್ತರಿಗೆ ಗಂಭೀರ ಪೆಟ್ಟು..!

ಯಾತ್ರೆಗೆ ತೆರಳುತ್ತಿದ್ದ 5 ಬಸ್ಸುಗಳ ನಡುವೆ ಡಿಕ್ಕಿ ಸಂಭವಿಸಿ (Accident) 6 ಮಂದಿ ಭಕ್ತರು ಗಂಭೀರವಾಗಿ ಗಾಯಗೊಂಡಿರುವ ಘಟನೆ

[ccc_my_favorite_select_button post_id="110578"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!