ಮೇಷ: ಈ ರಾಶಿಯವರಿಗೆ ನೆರೆಹೊರೆಯವರೊಂದಿಗೆ ಕಲಹ ಸಂಭವ. ಸಮಾಧಾನದ ನಡವಳಿಕೆ ಅಗತ್ಯ. ಮಕ್ಕಳಿಂದ ನೆಮ್ಮದಿ. ವಿವಾಹ ಯೋಗ. ಗೃಹ ನಿರ್ಮಾಣ ಕೆಲಸಗಳಲ್ಲಿ ಪ್ರಗತಿ.
ವೃಷಭ: ಈ ರಾಶಿಯವರ ನಿಷ್ಠೆ, ಪ್ರಾಮಾಣಿಕತೆಯಿಂದಾಗಿ ಯಶಸ್ಸು. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ಮೇಲಾಧಿಕಾರಿಗಳಿಂದ ಪ್ರಶಂಸೆ. ವ್ಯಾಪಾರಿಗಳಿಗೆ ಉದ್ಯಮದಲ್ಲಿ ಪ್ರಗತಿ.
ಮಿಥುನ: ಈ ರಾಶಿಯವರಿಗೆ ಸೋದರರಿಂದ ಸಲಹೆ. ಸಹಕಾರ ದೊರಕಿ ಗೃಹ ನಿರ್ಮಾಣ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುವಿರಿ. ದೂರದ ಊರಿಂದ ಪ್ರಮುಖ ಸುದ್ದಿಯೊಂದನ್ನು ಕೇಳಲಿದ್ದೀರಿ.
ಕಟಕ: ಈ ರಾಶಿಯವರ ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿ. ಹೊಸ ಅತಿಥಿ ಆಗಮನ ಸಾಧ್ಯತೆ. ದಾಂಪತ್ಯ ಸಮಸ್ಯೆಗಳಿಗೆ ಪರಿಹಾರ ದೊರೆತು, ನೆಮ್ಮದಿಯ ಜೀವನಕ್ಕೆ ನಾಂದಿ. ಶಿವ ಅಷ್ಟೋತ್ತರ ಪಠಿಸಿ.
ಸಿಂಹ: ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಮಕ್ಕಳಿಂದ ನೆಮ್ಮದಿ. ಯಂತ್ರೋಪಕರಣಗಳ ಖರೀದಿಗಾಗಿ ಖರ್ಚು.
ಕನ್ಯಾ: ಈ ರಾಶಿಯವರ ಪ್ರಾಪ್ತ ವಯಸ್ಕರಿಗೆ ಉತ್ತಮ ಸಂಬಂಧಗಳು ದೊರಕುವ ಸಾಧ್ಯತೆ. ಕೃಷಿ ಒಕ್ಕಲುತನ ಕಾರ್ಯಗಳಲ್ಲಿ ಸ್ವಲ್ಪ ಮಟ್ಟಿನ ತೊಡಕು. ಮಕ್ಕಳಿಂದ ಶುಭ ವಾರ್ತೆ.
ತುಲಾ: ಈ ರಾಶಿಯವರು ಹಿರಿಯರ ಸಲಹೆ ಸೂಚನೆಗಳನ್ನು ನಿರ್ಲಕ್ಷಿಸಬೇಡಿ. ಯಾವುದೇ ಕೆಲಸ ಕಾರ್ಯಗಳಲ್ಲಿ ಆತುರತೆ ತೋರಿ ಗಂಡಾಂತರಕ್ಕೆ ಸಿಲುಕದಿರಿ.
ವೃಶ್ಚಿಕ: ಈ ರಾಶಿಯವರಿಗೆ ದೂರದ ಪ್ರಯಾಣ ಯೋಗ. ವಾಹನ ಖರೀದಿ ಸಾಧ್ಯತೆ. ನ್ಯಾಯಾಲಯದಲ್ಲಿ ಜಯ. ಹಳದಿ ಲೋಹ ವ್ಯಾಪಾರಿಗಳಿಗೆ ಉತ್ತಮ ಲಾಭ. ಕುಟುಂಬ ಸದಸ್ಯರಿಂದ ಹೊಸ ಕೆಲಸ-ಕಾರ್ಯಗಳಿಗೆ ಸಹಕಾರ ದೊರಕಿ ನಿರಾಳತೆ.
ಧನಸ್ಸು: ಈ ರಾಶಿಯವರು ದೈನಂದಿನ ಚಟುವಟಿಕೆಯಲ್ಲಿ ಉತ್ಸಾಹ. ಕುಲದೇವತಾ ದರ್ಶನ ಲಭ್ಯ. ಋಣ ಪರಿಹಾರದಿಂದ ಸಂತೃಪ್ತಿ. ಚಿನ್ನಾಭರಣ ಖರೀದಿ ಸಾಧ್ಯತೆ. ವೃತ್ತಿಯಲ್ಲಿನ ಸಮಸ್ಯೆಗಳು ನಿವಾರಣೆ. ಸಾಮಾಜಿಕ ಗೌರವಕ್ಕೆ ಪಾತ್ರರಾಗುವಿರಿ.
ಮಕರ: ಈ ರಾಶಿಯವರ ವೃತ್ತಿ ಸಮಸ್ಯೆಗಳಿಂದ ಪರಿಹಾರ. ಮಹಿಳೆಯರು, ಕಲಾವಿದರುಗಳಿಗೆ ಉತ್ತಮ ಅವಕಾಶ ದೊರೆತು ಗೌರವಾದರ. ವಿವಾದಾತ್ಮಕ ಸಮಸ್ಯೆಗಳಿಂದ ಮುಕ್ತರಾಗುವಿರಿ.
ಕುಂಭ: ಈ ರಾಶಿಯವರ ಆರೋಗ್ಯದಲ್ಲಿ ಏರುಪೇರಾಗುವ ಸಂಭವ ಇರುವುದರಿಂದ ವೈದ್ಯರ ಸಲಹೆ ಅಗತ್ಯ. ಅನಾವಶ್ಯಕ ವ್ಯವಹಾರಕ್ಕೆ ತಲೆಹಾಕದಿರಿ. ಬಂಧುಗಳ ಆಗಮನದಿಂದಾಗಿ ಸಂತಸ.
ಮೀನ: ಈ ರಾಶಿಯ ಗೃಹಿಣಿಯರು ಆಯುಧಗಳ ವಿಷಯದಲ್ಲಿ ಜಾಗರೂಕರಾಗಿರಿ. ಆಧ್ಯಾತ್ಮಿಕ ಜೀವನದಲ್ಲಿ ಸಂತೃಪ್ತಿ ಕಾಣುವಿರಿ. ವಿಶೇಷ ವ್ಯವಹಾರಗಳಲ್ಲಿ ಅಗತ್ಯ ಪ್ರೋತ್ಸಾಹಗಳು ದೊರಕುವುದು.
ಮಾಸ: ಮಾರ್ಗಶಿರ ಮಾಸ
ಪಕ್ಷ: ಶುಕ್ಲ ಪಕ್ಷ
ತಿಥಿ: ಷಷ್ಠಿ
ನಕ್ಷತ್ರ: ಧನಿಷ್ಠ ನಕ್ಷತ್ರ
ರಾಹುಕಾಲ: 01:42 ರಿಂದ 03:08
ಗುಳಿಕಕಾಲ: 09:24 ರಿಂದ 10:50
ಯಮಗಂಡಕಾಲ: 06:33 ರಿಂದ 07:58
ಈ ದಿನದ ವಿಶೇಷ: ಸ್ಕಂದ ಷಷ್ಠಿ, ಕುಕ್ಕೆ ಶ್ರೀ ಸುಬ್ರಮಣ್ಯ ಸ್ವಾಮಿ ರಥೋತ್ಸವ
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್. ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು. ಮೊ:9620445122
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….