ದೊಡ್ಡಬಳ್ಳಾಪುರ: ನವರಾತ್ರಿ ಬೊಂಬೆಗಳ ಸಂಭ್ರಮ ನೋಡ ಬನ್ನಿ

ದೊಡ್ಡಬಳ್ಳಾಪುರ: ಮೈಸೂರಿನಲ್ಲಿ ನಡೆಯುವ ನವರಾತ್ರಿ ಮತ್ತು ದಸರಾ ಉತ್ಸವದ ಸಂದರ್ಭದಲ್ಲೇ ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ ಮುಂತಾದ ಜಿಲ್ಲೆಗಳಲ್ಲಿ ನವರಾತ್ರಿ ಬೊಂಬೆಗಳ ಸಂಭ್ರಮ ಪ್ರಾರಂಭವಾಗುತ್ತದೆ. 

ಅದೊಂದು ವರ್ಣರಂಜಿತ ಲೋಕ. ತರಾವರಿ ಗೊಂಬೆಗಳ ವಿವಿಧ ಭಾವಭಂಗಿಗಳಿಗೆ ಪೂರಕವಾಗಿ ನಿರ್ಮಾಣಗೊಂಡ ಆಕರ್ಷಣೀಯ ವಾತಾವರಣ. ನವರಾತ್ರಿಯ 9 ದಿನಗಳ ಕಾಲ ಇಲ್ಲಿನ ಮನೆಮನೆಗಳೂ ಆಕರ್ಷಕ ಗೊಂಬೆ ಮನೆಗಳಾಗಿ ಗಮನ ಸೆಳೆಯುತ್ತವೆ. ಸಾಂಪ್ರದಾಯಿಕವಾಗಿ ಈ ಆಚರಣೆ ಇದೀಗ ಆಧುನಿಕ ಸ್ಪರ್ಶದೊಂದಿಗೆ ಮತ್ತಷ್ಟು ಕಳೆಗಟ್ಟುತ್ತಾ ಪ್ರತಿವರ್ಷ ಹೊಸತನದ ಪ್ರತೀಕವಾಗಿ ಕಾಣಸಿಗುತ್ತಿರುವುದು ಗಮನೀಯ.

ಬೊಂಬೆಗಳ ಪ್ರದರ್ಶನದಲ್ಲಿ ಪುರಾಣದ ವ್ಯಕ್ತಿಗಳಿಂದ ಹಿಡಿದು ಆಧುನಿಕ ಜಗತ್ತಿನ ವಿದ್ಯಮಾನಗಳನ್ನು ಪ್ರತಿಬಿಂಬಿಸುವ ಬೊಂಬೆಗಳನ್ನು ನವರಾತ್ರಿ ಹಬ್ಬದಲ್ಲಿ ಪ್ರದರ್ಶನಗೊಳಿಸುತ್ತಾರೆ.

ಮಹಾಲಯ ಅಮಾವಾಸ್ಯೆ ದಿನದಿಂದ ವಿಜಯದಶಮಿ ತನಕ ನಡೆಯುವ ನವರಾತ್ರಿ ಬೊಂಬೆ ಪ್ರದರ್ಶನಕ್ಕೆ  ನಡುಮನೆಯಲ್ಲಿ ಉತ್ತಮ ವೇದಿಕೆಯನ್ನು ಸಿದ್ದಪಡಿಸಲಾಗಿರುತ್ತದೆ. ಯಾವ ಯಾವ ಬೊಂಬೆಗಳನ್ನು ಎಲ್ಲಿ ಕೂಡಿಸಬೇಕು ಎಂಬುದನ್ನು ಮನೆಯ ಸದಸ್ಯರು ಚರ್ಚಿಸಿ ನಿರ್ಧರಿಸುತ್ತಾರೆ.

ನವರಾತ್ರಿ ಬೊಂಬೆ ಹಬ್ಬದಲ್ಲಿ ಮಹಿಳೆಯರ ಪಾತ್ರ ಪ್ರಧಾನವಾಗಿರುತ್ತದೆ. ಮಕ್ಕಳು ಮನೆ ಮನೆಗಳಿಗೆ ತೆರಳಿ ನವರಾತ್ರಿ ಬೊಂಬೆಗಳ ನೋಡುವುದೇ ಸಂಭ್ರಮವಾಗಿರುತ್ತದೆ.

ನವರಾತ್ರಿಯ ಒಂಬತ್ತು ದಿನ ನಡೆಯುವ ಬೊಂಬೆ ಹಬ್ಬದಲ್ಲಿ ಕಳಸ ಸ್ಥಾಪನೆಯೊಂದಿಗೆ ಚಾಲನೆಗೊಳ್ಳುತ್ತದೆ. ನಂತರ ಪ್ರತಿನಿತ್ಯ ಒಂದೊಂದು ದೇವತೆಗಳನ್ನು ಪ್ರಧಾನವಾಗಿ ಪೂಜಿಸಲಾಗುತ್ತದೆ. ಪೂಜೆ ನೈವೇದ್ಯದ ನಂತರ ಮಹಿಳೆಯರಿಗೆ ಬಾಗಿನ ಮತ್ತು ಮಕ್ಕಳಿಗೆ ಸಿಹಿ ಹಂಚಲಾಗುತ್ತದೆ.

ನೂರಾರು ಬೊಂಬೆಗಳನ್ನಿಟ್ಟು ದಸರಾ ನೋಡಲು ಮೈಸೂರಿಗೆ ಹೋಗಿ, ಬೊಂಬೆ ನೋಡಲು ನಮ್ಮ ಮನೆಗೆ ತಪ್ಪದೇ ಬನ್ನಿ ಎಂದು ದೊಡ್ಡಬಳ್ಳಾಪುರ ಹಲವಾರು ಕುಟುಂಬಗಳು ಬಂಧುಗಳಿಗೆ ಮತ್ತು ಸ್ನೇಹಿತರನ್ನು ಆಹ್ವಾನಿಸುತ್ತಾರೆ.

ನವರಾತ್ರಿ ಹಬ್ಬದಲ್ಲಿ ಬೊಂಬೆಗಳನಿಟ್ಟು ಪೂಜಿಸುವ ಆಚರಣೆಗೆ ಹಲವಾರು ದಶಕಗಳಿಂದ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿದೆ. ಹಲವಾರು ಕುಟುಂಬಗಳು 50 ವರ್ಷಗಳಿಗೂ ಹಳೆಯದಾದ ಬೊಂಬೆಗಳನ್ನು ಈ ಹಬ್ಬದಲ್ಲಿಟ್ಟು ಪೂಜಿಸುತ್ತಾರೆ. ನವರಾತ್ರಿ ದಿನಗಳಲ್ಲಿ ನಡೆಯುವ ಈ ದಸರಾ ಬೊಂಬೆಗಳ ಸಂಭ್ರಮದಲ್ಲಿ ಮನೆಯ ಎಲ್ಲಾ ಸದಸ್ಯರು ಸಕ್ರಿಯವಾಗಿ ಭಾಗವಹಿಸುತ್ತಾರೆ.  

ನವರಾತ್ರಿ ಬೊಂಬೆಯ ಹಬ್ಬಕ್ಕೆ ಕುಟುಂಬದ ಸದಸ್ಯರು ಬೇರೆ ಬೇರೆ ಊರುಗಳಿಗೆ, ಧಾರ್ಮಿಕ ಸ್ಥಳಗಳಿಗೆ ಹೋದಾಗ ಹೊಸ ಹೊಸ ಬೊಂಬೆಗಳನ್ನು ತರುತ್ತಾರೆ.ವಿಶಿಷ್ಠ ವಿನ್ಯಾಸದ ವಿವಿಧ ಮಾದರಿಯ ಬೊಂಬೆಗಳು, ಕುಸುರಿ ಮಾಡಿರುವ ಬೊಂಬೆಗಳು ಗಮನ ಸೆಳೆಯುತ್ತವೆ.

ಕೈಲಾಸ ಪರ್ವತದಲ್ಲಿ ಶಿವ, ಪಾರ್ವತಿ ಮತ್ತು ಗಣಪತಿ ಕುಳಿತಿರುವುದು. ರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಂತ ಒಂದೆಡೆ ಇರುವಂತೆ ಮಾಡಿರುತ್ತಾರೆ.ಇದಲ್ಲದೆ ವಿಷ್ಣುವಿನ ದಶಾವತಾರ,ಮದುವೆ ದಿಬ್ಬಣ, ಪ್ರಾಣಿ ಪಕ್ಷಿಗಳು,ಉದ್ಯಾನವನ, ಮೃಗಾಲಯ,ದಶಾವತಾರ, ಮದುವೆ ದಿಬ್ಬಣ,ಗ್ರಾಮೀಣ ಚಿತ್ರಣ ಕೊರವಂಜಿ ಗೊಂಬೆಗಳನ್ನು ಕ್ರಮಬದ್ಧವಾಗಿ ಕೂಡಿಸಲಾಗುತ್ತದೆ. ಇವಕ್ಕೆ ಮೆರುಗು ನೀಡುವಂತೆ ಉದ್ಯಾನವನ,ಮೃಗಾಲಯ, ಕಾಡು,  ಪರ್ವತ, ಅರಮನೆ, ಬೆಟ್ಟ ಗುಡ್ಡ, ವಿಶೇಷ ಮಣ್ಣಿನ ಹಾಗೂ ಮರದ ಬೊಂಬೆಗಳು, ಚೈನಾ ಅಟಿಕೆಗಳು,ಪ್ಲಾಸ್ಟರ್ ಆಫ್ ಪ್ಯಾರೀಸ್, ಫೈಬರ್ ಬೊಂಬೆಗಳು, ಮಕ್ಕಳ ಆಧುನಿಕ ಆಟಿಕೆಗಳಲ್ಲದೆ ಗ್ರಾಮೀಣ ಬದುಕಿನ ದೃಶ್ಯಯವನ್ನು ಬೊಂಬೆಗಳಿಂದ ತಯಾರಿಸಿ ನವರಾತ್ರಿ ಹಬ್ಬದಲ್ಲಿ ಪ್ರದರ್ಶನ ಮಾಡುತ್ತಾರೆ. ಬೊಂಬೆ ಪ್ರದರ್ಶನ ನೋಡಲು ಬಂದ ನೆರೆಹೊರೆಯವರಿಗೆ, ಬಂಧುಗಳಿಗೆ ಮತ್ತು ಸ್ನೇಹಿತರಿಗೆ ಬೊಂಬೆಗಳನ್ನು ಪರಿಚಯಿಸುತ್ತಾ, ಈ ಬೊಂಬೆ ಇಂತಹ ಊರಿನಿಂದ ಮತ್ತು  ಯಾವ ಸಂದರ್ಭದಲ್ಲಿ ತರಲಾಯಿತು ಎಂಬುದನ್ನು ಹೇಳುವುದು ಮಾತ್ರ ಮರೆಯುವುದಿಲ್ಲ.   

ಬೊಂಬೆಗಳ ಪ್ರದರ್ಶನದಲ್ಲಿ ಪುರಾಣದ ವ್ಯಕ್ತಿಗಳಿಂದ ಹಿಡಿದು ಆಧುನಿಕ ಜಗತ್ತಿನ ವಿದ್ಯಮಾನಗಳನ್ನು ಪ್ರತಿಬಿಂಬಿಸುವ ಬೊಂಬೆಗಳನ್ನು ಕಾಣಬಹುದಾಗಿದೆ.ಒಂದೊಂದು ಮನೆಯಲ್ಲಿ ನೂರರಿಂದ ಐದು ನೂರು ಬೊಂಬೆಗಳ ತನಕ ಸಂಗ್ರಹಿಸಿ ಪ್ರತಿವರ್ಷ ಪ್ರದರ್ಶನಗೊಳಿಸುತ್ತಾರೆ.

ದೊಡ್ಡಬಳ್ಳಾಪುರದ ಕೆಲವು ಮನೆಗಳಲ್ಲಿ ಹಲವಾರು ವರ್ಷಗಳಿಂದ ಬೊಂಬೆ ಪ್ರದರ್ಶನ ಮಾಡುವವರು ಸುಮಾರು 50 ರಿಂದ 60 ವರ್ಷಗಳ ಹಳೆಯ ಬೊಂಬೆಗಳನ್ನು ಸಂಗ್ರಹಿಸಿದ್ದಾರೆ. ಇದರ ಜೊತೆಗೆ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಬೊಂಬೆಗಳನ್ನು ಹೊಸದಾಗಿ ಖರೀದಿ ಮಾಡುತ್ತಾರೆ.

ವಿಜಯದಶಮಿ ದಿನ ನಂತರ ಬೊಂಬೆಗಳನ್ನು ಜೋಪಾನವಾಗಿ ಮುಂದಿನ ವರ್ಷದ ಹಬ್ಬಕ್ಕೆ ಇಟ್ಟಿರುತ್ತಾರೆ. ಬೊಂಬೆಗಳನ್ನು ಪ್ರದರ್ಶನಕ್ಕೆ ಕೂಡಿಸುವುದು ಒಂದು ಕಲೆ. ಈ ನವರಾತ್ರಿ ಬೊಂಬೆ ಪ್ರದರ್ಶನ ಮಾಡುವ ಕಲೆ ಆಚರಣೆಗೆ ಬಂದಿರುವುದು ರಾಜಮನೆಗಳಿಂದ.ಮೊದಲು ಮಕ್ಕಳ ಮನರಂಜನೆಗಾಗಿ ಪ್ರಾರಂಭವಾದ ಈ ಬೊಂಬೆ ಪ್ರದರ್ಶನ ನಂತರದ ದಿನಗಳಲ್ಲಿ ಸಂಪ್ರದಾಯಕ ಆಚರಣೆ ಆಗಿದೆ. 

ಬೊಂಬೆ ಉತ್ಸವವು ದಕ್ಷಿಣ ಭಾರತದಲ್ಲಿ ಮಾತ್ರ ಕಂಡು ಬರುತ್ತದೆ. ಬಹುಶಃ ಇದಕ್ಕೆ ತಂಜಾವೂರು ಕಲೆಯ ಪ್ರಭಾವವಿದ್ದು ವೈಷ್ಣವರು ಹೆಚ್ಚಾಗಿ ಆಚರಿಸುತ್ತಾರೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….

ರಾಜಕೀಯ

ರಾಜ್ಯದ ಪರಿಸ್ಥಿತಿ ಆಲಿಬಾಬಾ ಮೂವತ್ತನಾಲ್ಕು ಕಳ್ಳರು ಎನ್ನುವಂಥಾಗಿದೆ: ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

ರಾಜ್ಯದ ಪರಿಸ್ಥಿತಿ ಆಲಿಬಾಬಾ ಮೂವತ್ತನಾಲ್ಕು ಕಳ್ಳರು ಎನ್ನುವಂಥಾಗಿದೆ: ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

ವಸತಿ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy)

[ccc_my_favorite_select_button post_id="109828"]
ಡಿಸೆಂಬರ್‌ನಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡದ ಅಸ್ಮಿತೆ ಪ್ರತಿಬಿಂಬಿಸಲು ಅವಕಾಶ: ಡಾ.ಮಹೇಶ್ ಜೋಶಿ

ಡಿಸೆಂಬರ್‌ನಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡದ ಅಸ್ಮಿತೆ ಪ್ರತಿಬಿಂಬಿಸಲು

ಕನ್ನಡ ಭಾಷೆಯು ಸ್ವತಂತ್ರ ಭಾಷೆಯಾಗಿದ್ದು, ತನ್ನದೇ ಆದ ಇತಿಹಾಸ ಹೊಂದಿದೆ. ಕನ್ನಡದ ಅಸ್ಮಿತೆ ಪ್ರತಿಬಿಂಬಿಸಲು ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ (Dr.Mahesh Joshi)

[ccc_my_favorite_select_button post_id="109751"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಪ್ರಸ್ತುತ ವರದಿ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಐಸಿಇ ದಾಳಿಗಳನ್ನು ಧಿಕ್ಕರಿಸಿ ಲಾಸ್ ಏಂಜಲೀಸ್‌ನಲ್ಲಿ ದೊಡ್ಡಮಟ್ಟದದಲ್ಲಿ ಶಾಂತಿಯುತ ಪ್ರತಿಭಟನೆ Los Angeles

[ccc_my_favorite_select_button post_id="108829"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಮೊಬೈಲ್ ಜಾಸ್ತಿ ಬಳಸುತ್ತಾಳೆಂದು ಹೆಂಡತಿಯ ಕೊಂದ ಪತಿ..!l Murder

ಮೊಬೈಲ್ ಜಾಸ್ತಿ ಬಳಸುತ್ತಾಳೆಂದು ಹೆಂಡತಿಯ ಕೊಂದ ಪತಿ..!l Murder

ಹೆಂಡತಿ ಮೊಬೈಲ್ ಜಾಸ್ತಿ ಬಳಸುತ್ತಾಳೆಂದು ಸಿಟ್ಟಿಗೆದ್ದ ಪತಿ ಆಕೆಯನ್ನು ಬರ್ಬರವಾಗಿ ಕೊಲೆ (Murder) ಮಾಡಿರುವ ಘಟನೆ ನಡೆದಿದೆ.

[ccc_my_favorite_select_button post_id="109624"]
ಜಗನ್ ಕಾರು ಚಕ್ರದಡಿ ಅಭಿಮಾನಿ ಸಾವು..!| ಆಘಾತಕಾರಿ Video ವೈರಲ್

ಜಗನ್ ಕಾರು ಚಕ್ರದಡಿ ಅಭಿಮಾನಿ ಸಾವು..!| ಆಘಾತಕಾರಿ Video ವೈರಲ್

ಅಭಿಮಾನಿಗಳು ಕೂಡ ಕಾರಿನ ಚಕ್ರದಡಿ ವೃದ್ಧರೊಬ್ಬರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೂ ಲೆಕ್ಕಿಸದೇ ಜಗನ್ (Jagan) ಅವರನ್ನು ಮುಟ್ಟಲು, ಹತ್ತಿರದಿಂದ ನೋಡಲು ನುಗ್ಗಿ ಬರುತ್ತಿದ್ದರು

[ccc_my_favorite_select_button post_id="109775"]

ಆರೋಗ್ಯ

ಸಿನಿಮಾ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

ವಿದ್ಯಾರ್ಥಿಗಳು ಸಾಕಷ್ಟು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ (CET) ಫಲಿತಾಂಶ ಪ್ರಕಟಗೊಂಡಿದೆ.

[ccc_my_favorite_select_button post_id="107812"]