ದೊಡ್ಡಬಳ್ಳಾಪುರ, (ಜೂ.01); ನಗರದ ತಾಲೂಕು ಆಸ್ಪತ್ರೆ ಆವರಣದಲ್ಲಿ ನೂತನ ಶವಾಗಾರವನ್ನು ನಿರ್ಮಿಸಿಕೊಡುವಂತೆ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆಹೆಚ್ ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾಹಿತ ನೀಡಿದ ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ದೊಡ್ಡಬಳ್ಳಾಪುರವು ಬೆಂಗಳೂರು ನಗರಕ್ಕೆ ಹೊಂದಿಕೊಂಡಿದ್ದು ಜಿಲ್ಲೆಯಲ್ಲಿ ಅತಿದೊಡ್ಡ ತಾಲ್ಲೂಕು. 2011 ರ ಜನಗಣತಿಯ ಪ್ರಕಾರ 434971 ಜನಸಂಖ್ಯೆ ಹೊಂದಿದ್ದು, ದೊಡ್ಡಬಳ್ಳಾಪುರ ನಗರದಲ್ಲಿ 93105 ಜನಸಂಖ್ಯೆ ಹೊಂದಿದೆ ಇಲ್ಲಿಂದ ಕೇವಲ 20 ಕಿಮೀ ದೂರದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ.
ಇಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಾರ್ಖಾನೆಗಳು ನಿರ್ಮಾಣವಾಗಿದ್ದು ಇದರ ಸಲುವಾಗಿ ರಾಜ್ಯ, ಹೊರರಾಜ್ಯಗಳಿಂದ ಸಾವಿರ ಸಂಖ್ಯೆ ಉದ್ಯೋಗಕ್ಕಾಗಿ ಬಂದು ನೆಲೆಸಿರುತ್ತಾರೆ.
ಇಲ್ಲಿ ಪ್ರತಿನಿತ್ಯ ಅಪಘಾತ, ಕೊಲೆ, ಆತ್ಮಹತ್ಯೆಯಂತಹ ಪ್ರತಿದಿನ ಒಂದಿಲ್ಲೊಂದು ಸಾವು ಸಂಭವಿಸುತ್ತಾ ಇರುತ್ತದೆ.
ನಗರದಲ್ಲಿ 100 ಹಾಸಿಗೆಯುಳ್ಳ ಸುಸರ್ಜಿತವಾದ ಆಸ್ಪತ್ರೆ ಇದ್ದು ಇಲ್ಲಿ ವೈದ್ಯರು, ದಾದಿಯರು, ವಾರ್ಡ್ ಬಾಯ್, ಸ್ವಚ್ಚತಗಾರರ ಅವಶ್ಯಕತೆ ಇದೆ, ಇಲ್ಲಿಂದ 1 ಕಿಮೀ ದೂರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶವಾಗಾರವಿದ್ದು ಒಂದಕ್ಕಿಂದ ಹೆಚ್ಚು ಶವಗಳು ಬಂದಲ್ಲಿ ಇಲ್ಲಿ ಯಾವುದೇ ವ್ಯವಸ್ಥೆ(ಕೊಲ್ಡ್ ಸ್ಟೋರೆಜ್) ಇರುವುದಿಲ್ಲ ಇದನ್ನು ಮನಗಂಡು ಗೋಕುಲ್ ದಾಸ್ ಎಂಬ ಖಾಸಗಿ ಕಂಪನಿಯು ನಾಲ್ಕು ಶವಗಳನ್ನು ಶೇಖರಣೆ ಮಾಡುವ ಶವಪೆಟ್ಟಿಗೆಯನ್ನು ನೀಡಿರುತ್ತಾರೆ. ಆದರೆ ಇದನ್ನು ಹಳೇಯ ಶವಾಗಾರದಲ್ಲಿ ಇಡಲು ಸ್ಥಳವಿಲ್ಲವಾಗಿದೆ.
ವೈದ್ಯರು ಸಹ ಪ್ರತಿನಿತ್ಯ ಆಸ್ಪತ್ರೆಯಿಂದ ಶವಾಗಾರಕ್ಕೆ ಹೋಗಲು ಸಮಯ ತೆಗೆದುಕೊಳ್ಳುವುದರಿಂದ ಆಸ್ಪತ್ರೆಯಲ್ಲಿರುವ ಬಂದು ಇನ್ನುಳಿದ ರೋಗಿಗಳಿಗೆ ತೊಂದರೆಯಾಗುತ್ತಿದೆ.
ಆದ್ದರಿಂದ ಅತಿಜರೂರಾಗಿ ಆಸ್ಪತ್ರೆಯ ಆವರಣದಲ್ಲಿ ಸ್ಥಳಾವಕಾಶವಿರುವುದರಿಂದ ಹೊಸ ಶವಾಗಾರವನ್ನು ನಿರ್ಮಿಸಿಕೊಡಬೇಕಾಗಿ ಮನವಿ ಮಾಡಿದ್ದೇವೆ. ಇದೇ ವೇಳೆ ತಾಲೂಕಿನಲ್ಲಿ ಉಂಟಾಗಿರುವ 108 ಆಂಬುಲೆನ್ಸ್ ಸಮಸ್ಯೆ ಬಗೆಹರಿಸಲು ಒತ್ತಾಯಿಸಲಾಗಿದೆ ಎಂದರು.
ಈ ವೇಳೆ ಕರವೇ ಪ್ರವೀಣ್ ಶೆಟ್ಟಿ ಬಣದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಮೇಶ್ ವಿರಾಜ್, ಪ್ರಧಾನ ಕಾರ್ಯದರ್ಶಿ ಎಸ್ ಎಲ್ ಎನ್ ವೇಣು, ಉಪಾಧ್ಯಕ್ಷ ಜೋಗಳ್ಳಿ ಅಮ್ಮ, ಖಜಾಂಚಿ ಆನಂದ್, ಕಾರ್ಮಿಕ ಘಟಕದ ಅಧ್ಯಕ್ಷರಾದ ರಾಜಘಟ್ಟ ಮಹೇಶ್, ಕಾರ್ಯದರ್ಶಿ ಹಾರಳ್ಳಿ ಮಂಜುನಾಥ್, ಮುಖೇನಳ್ಳಿ ರವಿ, ನಗರ ಘಟಕದ ಅಧ್ಯಕ್ಷ ಶ್ರೀನಗರ ಬಶೀರ್, ಮುಖಂಡರು ಸುಬ್ರಮಣಿ, ರಾಜಣ್ಣ, ಮಹೇಶ್ ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….