ಗೌರಿಬಿದನೂರು, (ಜೂ.08); ತಾಲ್ಲೂಕಿನ ಬಿಸಲಹಳ್ಳಿಯಲ್ಲಿ ಶನಿವಾರ ಬೆಳಿಗ್ಗೆ ವಿದ್ಯುತ್ ಅವಘಡ ನಡೆದಿದ್ದು ಲೈನ್ ಮೆನ್ ಉದಯ್ (28 ವರ್ಷ) ವಿದ್ಯುತ್ ಕಂಬದಲ್ಲೇ ಸಾವನ್ನಪ್ಪಿದ್ದಾರೆ.
ಮಳೆಯ ಪರಿಣಾಮವಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದ್ದ ಕಾರಣ ಅದನ್ನು ಸರಿಪಡಿಸುವ ಸಲುವಾಗಿ ಶನಿವಾರ ವಿದ್ಯುತ್ ಕಂಬ ಏರಿದ್ದ ಉದಯ್ ಏಕಾಏಕಿ ವಿದ್ಯುತ್ ಹರಿದು ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿರುವ ಉದಯ್ ದಾವಣಗೆರೆ ಮೂಲದವರಾಗಿದ್ದು, ಬೆಸ್ಕಾಂ ಇಲಾಖೆಯ ನೌಕರರಾಗಿದ್ದಾರೆ. ಬೆಸ್ಕಾಂ ನೌಕರರಿಗೆ ಯಾವುದೇ ಸುರಕ್ಷತಾ ಪರಿಕರಗಳನ್ನು ನೀಡದ ಕಾರಣ ಇಂತಹ ಅವಘಡಗಳಿಗೆ ಕಾರಣವಾಗಿದೆ.
ಘಟನೆ ನಡೆದು ಒಂದೆರಡು ಗಂಟೆಯಾದರೂ ಕೂಡ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಟದಹೊಸಹಳ್ಳಿ ಯಲ್ಲಿ ಶುಕ್ರವಾರ ನಡೆದ ಅಪಘಾತದ ಬೆಸ್ಕಾಂ ಸಿಬ್ಬಂದಿಗಳ ಸಾವಿನ ಸುದ್ದಿ ಮರೆಯುವ ಮುನ್ನವೇ ಮತ್ತೇ ಬೆಸ್ಕಾಂ ನೌಕರರ ಸಾವಿನ ಘಟನೆ ಇಲಾಖೆಗೆ ಕಪ್ಪುಚುಕ್ಕೆಯಾಗಿದೆ.
ಮಳೆಗಾಲದಲ್ಲಿ ಸಿಬ್ಬಂಧಿಯ ಸುರಕ್ಷತೆ ಕಾಪಾಡಲು ಅಧಿಕಾರಿಗಳು ಮುಂದಾಗಬೇಕಾಗಿದೆ ಎನ್ನುವುದು ನಾಗರೀಕರ ಒತ್ತಾಯವಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….