ದೊಡ್ಡಬಳ್ಳಾಪುರ, (ಸೆ.01): ಇಲ್ಲಿನ ಯುವ ಸಂಚಲನ, ನಾಗರಕೆರೆ ಜೀವ ವೈವಿಧ್ಯತೆ ಸಂರಕ್ಷಣಾ ಸಮಿತಿ ಹಾಗೂ ನಗರಸಭೆ ಸಹಯೋಗದಲ್ಲಿ ಸೆ.1 ರಂದು ಬೆಳಿಗ್ಗೆ 10 ಗಂಟೆಗೆ ನಾಗರಕೆರೆ ಆಚೆಗುಡಿಯ ಆಂಜನೇಯ ದೇವಾಲಯದ ಬಳಿ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆ ಶಿಬಿರ ನಡೆಯಲಿದೆ.
ಈ ಸಲದ ಗಣೇಶ ಹಬ್ಬವನ್ನು ವಿಷಕಾರಿ ಬಣ್ಣಗಳನ್ನು ಬಳಸಿದ, ಬಿದಿರು ಹುಲ್ಲಿನ ಹಾಗೂ ಪಿಒಪಿ ಗಣೇಶ ಮೂರ್ತಿ ಬಳಸದೆ ಊರಿನ ನೆಲ,ಜಲ ಮೂಲಗಳ ಸಂರಕ್ಷಣೆಗಾಗಿ ಪರಿಸರ ಸ್ನೇಹಿಯಾಗಿ ಹಾಗೂ ಮಕ್ಕಳಲ್ಲಿ ಪರಿಸರದ ಜಾಗೃತಿ ಮೂಡಿಸಲಾಗುತ್ತದೆ.
ನುರಿತ ಕಲಾವಿದರಿಂದ ಬಸುದೆ ಜೇಡಿ ಮಣ್ಣಿನಿಂದ ಗಣಪನ ಮೂರ್ತಿ ತಯಾರಿಸುವ ವಿಧಾನವನ್ನು ಉಚಿತವಾಗಿ ತಿಳಿಸಿಕೊಡಲಾಗುವುದು.
ಮಕ್ಕಳು ಹಾಗೂ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದು ಯುವ ಸಂಚಲನ ಅಧ್ಯಕ್ಷ ಚಿದಾನಂದ್ ಮನವಿ ಮಾಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….