ವೇದ ಜ್ಯೋತಿಷ್ಯದ ಆಧಾರದ ಮೇಲೆ ಕರ್ಕಾಟಕ ರಾಶಿಯ ಜಾತಕದಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗ, ಆರ್ಥಿಕ ಸ್ಥಿತಿ, ಕುಟುಂಬ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಫಲಿತಾಂಶಗಳು ಹೀಗಿದೆ.
ರಾಶಿ ಚಕ್ರದಲ್ಲಿ ನಾಲ್ಕನೇ ಜ್ಯೋತಿಷ್ಯ ರಾಶಿಯಾಗಿದ್ದು, ಆಕಾಶ ರೇಖಾಂಶದ 90-120 ಡಿಗ್ರಿಗಳನ್ನು ವ್ಯಾಪಿಸಿದೆ.
ಕರ್ಕಾಟಕ ರಾಶಿ: ಹಿಂದೆಂದೂ ಇಲ್ಲದ ಸಮಸ್ಯೆಗಳು ಈಗ ದಿಢೀರನೆ ಕಾಣಿಕೊಳ್ಳುತ್ತದೆ. ನಿಮಗೆ ತಾಳ್ಮೆ ಕಡಿಮೆಯಾಗುತ್ತದೆ. ಇದು ಗಾಢ ಸಂಬಂಧಗಳನ್ನು ಕೆಡಿಸುತ್ತದೆ. ಅಷ್ಟಮ ಶನಿಯ ತೊಂದರೆ ನಿಮಗೆ ನಾನಾ ವಿಧದ ಉಪಟಳ ಕೊಡುತ್ತದೆ. ಚೆನ್ನಾಗಿಯೇ ಇದ್ದ ಪತಿ-ಪತ್ನಿಯರ ನಡುವೆ ವೈಮನಸ್ಸು ಮೂಡಬಹುದು. ಸಹೋದರರ ನಡುವೆ ಮನಸ್ಥಾಪ ಬರಬಹುದು.
ತಂದೆ-ತಾಯಿ ಯರ ಜೊತೆಗಿನ ಸಂಬಂಧ ಕೆಡಬಹುದು. ಮಕ್ಕಳಿಂದ ಬೇಜಾರಾಗಬಹುದು. ಹೀಗೆ ನಾನಾ ರೀತಿಯಲ್ಲಿ ನಿಮ ತಾಳ್ಮೆಯನ್ನು ಪರೀಕ್ಷಿಸುವ ಘಟನೆಗಳು ನಡೆಯುತ್ತದೆ. ಹೆದರಬೇಡಿ. ಆದಷ್ಟು ಮೌನವಾಗಿ ಇರಿ. ಅನಾವಶ್ಯಕವಾಗಿ ಯಾರೊಂದಿಗೂ ಮಾತನಾಡಬೇಡಿ. ನೀವೇ ನಿಮ್ಮ ಆತ್ಮಾವಲೋಕನ ಮಾಡಿಕೊಳ್ಳಿ. ಧ್ಯಾನದಲ್ಲಿ ಹೆಚ್ಚು ಸಮಯ ಮೀಸಲಿಡಿ.
ಕೇತು ಅನುಗ್ರಹ ಇರುವುದರಿಂದ ಆರೋಗ್ಯ ಹಾಗೂ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಆದರೆ ಖರ್ಚುಗಳೂ ಒಂದರ ಹಿಂದೆ ಒಂದು ಕಾದಿರುತ್ತದೆ. ಶುಕ್ರ ನಿಮಗೆ ಶುಭ ಫಲಗಳ ನೀಡುತ್ತಾನೆ. ಶುಕ್ರ ತೊಂದರೆಗಳಿಂದ ಕಾಪಾಡುತ್ತಾನೆ. ವೃತ್ತಿಯಲ್ಲಿ ಒತ್ತಡ ಇದೆ. ಅಕ್ಕಪಕ್ಕದ ಜನರೊಡನೆ ಎಚ್ಚರಿಕೆಯಿಂದ ವರ್ತಿಸಿ. ಮಾತು ಕಡಿಮೆ ಕೆಲಸ ಹೆಚ್ಚು ಮಾಡಿ.
ಕರ್ಕಾಟಕ ರಾಶಿ: ಪುನರ್ವಸು ನಕ್ಷತ್ರದಲ್ಲಿ (4ನೇ ಪಾದ), ಪುಷ್ಯಮಿ ನಕ್ಷತ್ರದಲ್ಲಿ (4 ಪಾದಗಳು), ಆಶ್ಲೇಷ ನಕ್ಷತ್ರದಲ್ಲಿ (4 ಪಾದಗಳು) ಜನಿಸಿದ ಜನರು ಕರ್ಕಾಟಕ ರಾಶಿ ಅಡಿಯಲ್ಲಿ ಬರುತ್ತಾರೆ. ಈ ರಾಶಿ ಅಧಿಪತಿ ಚಂದ್ರ.
ಕರ್ಕಾಟಕ ರಾಶಿಗೆ ಸೂಚಿಸಲಾದ ಅಕ್ಷರಗಳು: ಹಿ, ಹು, ಹೆ, ಹೂ, ಡ, ಡಿ, ಡು, ಡೇ.
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….