ದೇವನಹಳ್ಳಿ: ಕರ್ನಾಟಕದ ಯಶಸ್ಸನ್ನು ಕಟ್ಟಿಹಾಕಲಿಕ್ಕಾಗಿ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ, ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆರೋಪಿಸಿದ್ದಾರೆ.
ಅಮೇರಿಕಾ ಪ್ರವಾಸಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ, ಪ್ಯಾರಿಸ್ ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಿಂತಿರುಗಿದ ಪ್ರಿಯಾಂಕ್ ಖರ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಸಾ ತಡೆ ಹಿಡಿಯಲು ಪರ್ವಾಗಿಲ್ಲ. ಆದರೆ ಕಾರಣ ನೀಡದೇ ಅನುಮತಿ ನಿರಾಕರಿಸಿರುವುದು ಸರಿಯಲ್ಲ, ನಾವೇನು ಆಟ ಅಡೋದಕ್ಕೆ ವಿದೇಶಕ್ಕೆ ಹೋಗುತ್ತಿಲ್ಲ. ಕುಟುಂಬದ ಜೊತೆ ಪ್ರವಾಸಕ್ಕೆ ಹೋಗ್ತಾ ಇಲ್ಲ.. ಜನರಿಗೆ ಉದ್ಯೋಗ ಸೃಷ್ಟಿ ಮಾಡಲು, ಜನರಿಗೆ ಒಳ್ಳೇದು ಮಾಡಲು ಹೋಗುತ್ತಿರುವುದು ಎಂದು ಕಿಡಿಕಾರಿದರು.
ಈ ಹಿಂದೆ ನಾನು ಹಾಗೂ ಎಂ ಬಿ ಪಾಟೀಲ್ ಅಮೆರಿಕಕ್ಕೆ ಪ್ರವಾಸ ಹೋಗಿದ್ದಾಗ ಸುಮಾರು 35 ರಿಂದ 40 ಸಾವಿರ ಕೋಟಿ ರೂ. ಮೊತ್ತದ ಲೆಟರ್ ಆಫ್ ಇಂಟೆಂಟ್ ಹಾಗೂ ಒಪ್ಪಂದಗಳನ್ನು ಮಾಡಿಕೊಂಡು ಬಂದಿದ್ದೆವು. ಅದನ್ನು ಇನ್ವೆಸ್ಟ್ ಕರ್ನಾಟಕ ಮೂಲಕ ಮಾಡಿದ್ದೆವು.
Had the opportunity to get an up-close look at the Rafale and engage in a
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) June 17, 2025
technical briefing.
Undoubtedly, it is one of the most advanced fighter aircraft in the world. The sophistication of its avionics, weapon systems and versatility across mission profiles is impressive and… pic.twitter.com/wSsWrLV1mb
ಇತ್ತೀಚೆಗೆ ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್ ವಸ್ತು ತಯಾರಿಕೆಗೆ ಒಪ್ಪಿಗೆ ನೀಡಲಾಗಿದೆ. ಸುಮಾರು 20 ಸಾವಿರ ಕೋಟಿ ರೂ. ಮೊತ್ತದ ಯೋಜನೆಗೆ ಅನುಮೋದನೆ ಕೊಟ್ಟಿದ್ದೇವೆ. ಇದರಿಂದಲೇ ಕರ್ನಾಟಕ ಎಲೆಕ್ಟ್ರಾನಿಕ್ಸ್ ಹಬ್ ಹಾಗೂ ಏರೋಸ್ಪೇಸ್ ಹಬ್ ಆರಂಭವಾಗಿದೆ.
ಅಮೆರಿಕಕ್ಕೆ ತೆರಳದಂತೆ ವಿನಾಕಾರಣ ನಿರ್ಬಂಧಿಸಿರುವುದು ಸರಿಯಲ್ಲ. ರಾಜ್ಯಕ್ಕೆ ಬಂಡವಾಳ ತರುವುದು ಕೂಡ ನಮ್ಮ ಕರ್ತವ್ಯವಾಗಿದೆ. ಕರ್ನಾಟಕಕ್ಕೆ ಒಳ್ಳೆಯದಾದರೆ ನಮ್ಮ ದೇಶಕ್ಕೆ ತಾನೇ ಒಳ್ಳೆಯದು. ಕರ್ನಾಟಕವು ದೇಶದ ಆರ್ಥಿಕತೆಯ ಎಂಜಿನ್ ಇದ್ದಂತೆ ಎಂದು ಹೇಳಿದರು.
ವಿದೇಶಕ್ಕೆ ಹೋಗಿ ಇಷ್ಟೆಲ್ಲಾ ಮಾಡಿದರು ಈಗ ಅಮೆರಿಕ ಪ್ರವಾಸ ಪ್ರಸ್ತಾವ ಯಾಕೆ ತಿರಸ್ಕರಿಸಿದರೋ ಗೊತ್ತಿಲ್ಲ.. ಆದರೆ ದೊಡ್ ದೊಡ್ ಮಾತಾಡ್ತಾರೆ, ವಿಕಸಿತ ಭಾರತದ ಕಟ್ಟಿತ್ತೇವೆ, ಅಮೃಯ ಕಾಲ ಕಟ್ಟುತ್ತೇವೆ, ಮೇಕ್ ಇನ್ ಇಂಡಿಯಾ ಇಂಡಿಯಾ ಅಂತ ಹೇಳುತ್ತಾರೆ ಆದರೆ ಅಂತಹ ಕಾರ್ಯಕ್ಕೆ ಕೈಹಾಕಲು ಮುಂದಾದರೆ ತಡೆಯುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರದ ಯಶಸ್ಸನ್ನು ಕೇಂದ್ರ ಸರ್ಕಾರ ಕಟ್ಟಿಹಾಕುತ್ತಿದೆ. ಅಮೆರಿಕಕ್ಕೆ ತೆರಳಲು ಯಾಕೆ ನಿರ್ಬಂದಿಸಿದ್ದಾರೆ ಎಂದು ಕಾರಣ ನೀಡಬೇಕು ಎಂದು ಪ್ರಿಯಾಂಕ್ ಖರ್ಗೆ.